Site icon Suddi Belthangady

ಕೊಕ್ಕಡ: ಹಳ್ಳಿಂಗೇರಿ ಎರಡು ಮನೆಗಳಿಗೆ ಮರ ಬಿದ್ದು ಹಾನಿ

ಕೊಕ್ಕಡ: ಕಳೆದ ಸಂಜೆ ಸುರಿದ ಭಾರಿ ಗಾಳಿ ಮಳೆಗೆ ಹಳ್ಳಿಂಗೇರಿ ಕ್ವಾಟ್ರಸ್ ನ ಎರಡು ಮನೆಗಳಿಗೆ ಹಾಗೂ ಕಾರಿನ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿ ಶೀಟ್, ಹಂಚು ಪುಡಿಯಾಗಿದ್ದು ಮೇ.10 ರಂದು ಸಂಭವಿಸಿದೆ.

ಘಟನಾ ಸ್ಥಳಕ್ಕೆ ಗ್ರಾ.ಪಂ.ಅಧ್ಯಕ್ಷ ಯೋಗೀಶ್ ಆಲಂಬಿಲ, ಗ್ರಾ.ಪಂ. ಉಪಾಧ್ಯಕ್ಷೆ ಪವಿತ್ರ ಗುರುಪ್ರಸಾದ್, ಪಂ.ಸದಸ್ಯರಾದ ವಿಶ್ವನಾಥ್ ಶರತ್, ವನಜಾಕ್ಷಿ, ಬೂತ್ ಸಮಿತಿ ಅಧ್ಯಕ್ಷ ಪ್ರಶಾಂತ್, ಅಶ್ವಿನಿ, ವಿನಯ, ಕಿಶೋರ್, ಶಕ್ತಿ ಕೇಂದ್ರ ಅಧ್ಯಕ್ಷ ಜನಾರ್ದನ್ ರವರು ಭೇಟಿ ನೀಡಿ, ಸೂಕ್ತ ಪರಿಹಾರದ ವ್ಯವಸ್ಥೆ ನೀಡುವುದಾಗಿ ಭರವಸೆ ನೀಡಿದರು.

Exit mobile version