Site icon Suddi Belthangady

ಉಜಿರೆ ಸಂತ ಅಂತೋಣಿ ಚರ್ಚ್ ನಲ್ಲಿ ರಕ್ಷಿತ್ ಶಿವರಾಂ ಪರ ಮತಯಾಚನೆ

ಉಜಿರೆ : ಮೇ 10ರಂದು ನಡೆಯುವ ವಿಧಾನ ಸಭಾ ಚುನವಣೆಯಲ್ಲಿ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಪರ ಮೇ 7ರಂದು ಉಜಿರೆ ಸಂತ ಅಂತೋಣಿ ಚರ್ಚ್ ನಲ್ಲಿ ಮತ ಯಾಚನೆ ಮಾಡಿ ಮಾತನಾಡಿದರು.

ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಫೆರ್ನಾಂಡಿಸ್ ಮಾತನಾಡಿ ಕೋವಿಡ್ ಹಾಗೂ ಇನ್ನಿತರ ಸಂದರ್ಭ ದಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ರಕ್ಷಿತ್ ಶಿವರಾಂ ಅನೇಕ ಕೆಲಸ ಕಾರ್ಯಗಳಲ್ಲಿ ಮಗ್ನರಾಗಿ ಕಳೆದ 3ವರ್ಷಗಳಿಂದ ಜನರೊಟ್ಟಿಗೆ ಬೆರೆತ್ತಿದ್ದಾರೆ. ಈ ಬಾರಿ ಅವರನ್ನು ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿ ಯಾಗಿ ಆಯ್ಕೆಯಾಗಿದ್ದಾರೆ ಅವರನ್ನು ಬಹುಮತದಿಂದ ಮತ ನೀಡಿ ಗೆಲ್ಲಿಸಿ ಕೊಡಬೇಕಾಗಿ ವಿನಂತಿಸಿದರು.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಕ್ಷಿತ್ ಶಿವರಾಂ ರವರ ಧರ್ಮ ಪತ್ನಿ ಶ್ರೀಮತಿ ಅನ್ವಿಕಾ ರಕ್ಷಿತ್ ಶಿವರಾಂ, ಚಲನಾ ಚಿತ್ರ ನಟ ವಿಜಯರಾಘವೇಂದ್ರ ರವರ ಧರ್ಮ ಪತ್ನಿ ಸ್ಪಂದನ ವಿಜಯರಾಘವೇಂದ್ರ, ಧನಂಜಯ್ ರಾವ್, ರಂಜನ್, ತರುಷ್, ಸಂತೋಷ್, ಈ ಸಂದರ್ಭದಲ್ಲಿ, ಮೊದಲಾದವರು ಉಪಸ್ಥಿತರಿದ್ದರು.

Exit mobile version