Site icon Suddi Belthangady

ಆರಂಬೋಡಿ: ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರ ಪರ ಬಿರ್ವೆರ್ ಕುಡ್ಲದ ಸ್ಥಾಪಕ, ಯುವ ನಾಯಕ ಉದಯ್ ಪೂಜಾರಿ ಬಳ್ಳಾಲ್ ಬಾಗ್ ಮತಪ್ರಚಾರ

ಬೆಳ್ತಂಗಡಿ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರ ಪರವಾಗಿ ಬಿರ್ವೆರ್ ಕುಡ್ಲ ಸಂಘಟನೆಯ ಸ್ಥಾಪಕರು, ಅಶಕ್ತರಿಗೆ ಹಲವಾರು ಸೇವೆಯನ್ನು ನೀಡಿ ಸಮಾಜಮುಖಿ ಚಿಂತನೆಯೊಂದಿಗೆ ಗುರುತಿಸಿಕೊಂಡಿರುವ ಯುವ ನಾಯಕ, ನಟ ಉದಯ್ ಪೂಜಾರಿ ಬಳ್ಳಾಲ್ ಬಾಗ್ ಆರಂಬೋಡಿ ಪರಿಸರದಲ್ಲಿ ಮತ ಪ್ರಚಾರ ಮಾಡಿದರು.ನೂರಾರು ಬಿಜೆಪಿ ಕಾರ್ಯಕರ್ತರೊಂದಿಗೆ ತಾಲೂಕಿನ ಹಲವು ಕಡೆಗಳಲ್ಲಿ ಹರೀಶ್ ಪೂಂಜರವರ ಪರ ಮತ ಪ್ರಚಾರ ಮಾಡುತ್ತಿದ್ದಾರೆ.

ಈ ಸಂದರ್ಭದಲ್ಲಿ ಪ್ರಖರ ವಾಗ್ಮಿ ಸಹನಾ ಕುಂದರ್, ಹರೀಶ್ ಪೂಂಜರವರ ಪತ್ನಿ ಡಾ.ಸ್ವೀಕೃತಾ ಪೂಂಜ, ಆರಂಬೋಡಿ ಗ್ರಾ.ಪಂ ಅಧ್ಯಕ್ಷೆ ವಿಜಯಾ, ಬಿಜೆಪಿಯ ಪ್ರಮುಖರಾದ ಸೋಮನಾಥ ಬಂಗೇರ, ಕಿರಣ್ ಕುಮಾರ್ ಮಂಜಿಲ, ರಾಜೇಶ್ ಮೂಡುಕೋಡಿ, ಅಶೋಕ್ ಒಟ್ಲ, ಪ್ರಭಾಕರ ಹುಳಿಮೇರು, ಸತೀಶ್ ಆರಂಬೋಡಿ, ಸುರೇಂದ್ರ ಹಜ್ಜಾಡಿ, ನಿತೀಶ್ ಗುಂಡೂರಿ, ರಾಜೇಶ್ ಆರಂಬೋಡಿ, ಆಶಾ ಎಸ್ ಶೆಟ್ಟಿ, ದಯಾನಂದ ದೇವಾಡಿಗ, ಪೃಥ್ವಿ ಬಂಗೇರ, ಉದಯ್ ನಾವೂರು ಹಾಗೂ ಬಿಜೆಪಿಯ ಕಾರ್ಯಕರ್ತರು, ಜನಪ್ರತಿನಿಧಿಗಳು, ಶಕ್ತಿಕೇಂದ್ರದ ಪ್ರಮುಖರು, ಅಭಿಮಾನಿಗಳು ಉಪಸ್ಥಿತರಿದ್ದರು.

Exit mobile version