Site icon Suddi Belthangady

ಧರ್ಮಸ್ಥಳ ಬಿಜೆಪಿ ಮತ್ತು ಹಿಂದೂ ಕಾರ್ಯಕರ್ತರಿಂದ ಹನುಮಾನ್ ಚಾಲೀಸ್ ಪಠಣ

ಕನ್ಯಾಡಿ:ಬಜರಂಗದಳವನ್ನ‌ ಕಾಂಗ್ರೆಸ್ ನಿಷೇಧಿಸುವ ಭರವಸೆ ನೀಡಿ ಹೊರಡಿಸುವ ಪ್ರಣಾಳಿಕೆಯನ್ನ ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ಅಭಿಯಾನ ನಡೆಸುತ್ತಿರುವ ಬೆನ್ನಲ್ಲೇ ಆಕ್ರೋಶಗೊಂಡ ಬಿಜೆಪಿ ಮೇ.3ರಂದು ಸಂಜೆ ಒಂದು ಗಂಟೆಗಳ ಕಾಲ ಧರ್ಮಸ್ಥಳ ಗ್ರಾಮದ ಕನ್ಯಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಹನುಮಾನ್ ದೇವರ ಫೋಟೋ ಇಟ್ಟು ಹನುಮಾನ್ ಚಾಲೀಸ್ ಪಠಣ ಮಾಡಿದೆ.

ಹನುಮಾನ್ ಚಾಲೀಸ್ ಪಠಣ ಮಾಡುವ ಮೂಲಕ ಬಜರಂಗದಳವನ್ನು ಸ್ಮರಿಸಿದರು.

ಈ ಕಾರ್ಯಕ್ರಮದಲ್ಲಿ ಅನೇಕ ಬಿಜೆಪಿಯ ಮುಖಂಡರು ಹಾಗೂ ಸಂಘಟನಾ ಮುಖಂಡರು ಪಾಲ್ಗೊಂಡಿದ್ದರು ಐವತ್ತಕ್ಕೂ ಮಿಕ್ಕಿ ಕಾರ್ಯಕರ್ತರು ಭಾಗವಹಿಸಿದ್ದರು.

Exit mobile version