Site icon Suddi Belthangady

ಮಡಂತ್ಯಾರು: ಸಿ.ಎ ಬ್ಯಾಂಕಿನ ಮಾಜಿ ಅಧ್ಯಕ್ಷ ಮಹಾವೀರ ಬಲ್ಲಾಳ್ ನಿಧನ

ಮಡಂತ್ಯಾರು: ಮಾಲಾಡಿ ಗ್ರಾಮದ ಕೊಲ್ಪೆದಬೈಲಿನ ಮಹಾವೀರ ಬಲ್ಲಾಳ್ ಸಮ್ಮೇದ, ಶಿಖರ್ಜಿ ಯಾತ್ರಾ ಸಮಯದಲ್ಲಿ ಹೃದಯಾಘಾತದಿಂದ ನಿಧನರಾದರು.
ಬಿಹಾರದ ಕುಂಡಲಾಪುರದಲ್ಲಿ ಇಂದು ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಇವರು ಸುಮಾರು ೨೦ ಜನರ ತಂಡ ಯಾತ್ರೆಗೆ ತೆರಳಿದ್ದು, ಮೇ.೭ರಂದು ವಾಪಾಸ್ಸಾಗುವರಿದ್ದರು.ಇಂದು ಮುಂಜಾನೆ ಎದೆನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.
ಮೃತರು ಮಡಂತ್ಯಾರಿನ ಕೃಪಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ, ನಿರ್ದೇಶಕರಾಗಿ ಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದರು.
ಇವರು ಪತ್ನಿ ರಾಜೇಶ್ವರಿ.ಎನ್ ಬಲ್ಲಾಳ್, ಪುತ್ರರಾದ ಶ್ರೇಯಸ್ ಬಲ್ಲಾಳ್, ಶ್ರೀಕಾಂತ್ ಬಲ್ಲಾಳ್, ಪುತ್ರಿ ಶ್ರುತ ಬಲ್ಲಾಳ್ ಮತ್ತು ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Exit mobile version