Site icon Suddi Belthangady

ಬೆಳಾಲು: ಮಾಯ ಶಾಲೆಯ ಇಬ್ಬರು ವಿದ್ಯಾರ್ಥಿಗಳು ರಾಜ್ಯ ಮಟ್ಟದ ಎನ್.ಎಮ್.ಎಮ್.ಎಸ್ ವಿದ್ಯಾರ್ಥಿ ವೇತನಕ್ಕೆ ಆಯ್ಕೆ

ಬೆಳಾಲು: 2022-23 ನೇ ಶೈಕ್ಷಣಿಕ ವರ್ಷದಲ್ಲಿ ನಡೆದ ರಾಜ್ಯ ಮಟ್ಟದ ಎನ್.ಎಮ್.ಎಮ್.ಎಸ್ ಪರೀಕ್ಷೆಯಲ್ಲಿ ಬೆಳ್ತಂಗಡಿ ತಾಲೂಕಿನಿಂದ ಪರೀಕ್ಷೆ ಬರೆದ 1091 ಮಂದಿ 8 ನೇ ತರಗತಿಯ ವಿದ್ಯಾರ್ಥಿಗಳಲ್ಲಿ 30 ಮಂದಿ ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಆ ಪೈಕಿ ಸ.ಉ.ಪ್ರಾ.ಶಾಲೆ ಮಾಯ ಇಲ್ಲಿನ ಶ್ರೇಯಸ್ ಮತ್ತು ಲಿಖಿತಾ ಈ ಇಬ್ಬರು ವಿದ್ಯಾರ್ಥಿಗಳು ಎನ್.ಎಮ್.ಎಮ್.ಎಸ್ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿದ್ದಾರೆ.

ಮಾಯ, ಬೆಳಾಲು ಗ್ರಾಮದ ಲಕ್ಷ್ಮಣ ನಾಯ್ಕ ಹಾಗೂ ಸುಧಾ ಇವರ ಪುತ್ರ ಮಾಸ್ಟರ್ ಶ್ರೇಯಸ್ ಹಾಗೂ ಇದೇ ಗ್ರಾಮದ ನಿವಾಸಿಗಳಾದ ಶೀನಪ್ಪ ಗೌಡ ಹಾಗೂ ಯಮುನ ಇವರ ಪುತ್ರಿ ಕುಮಾರಿ ಲಿಖಾತಾ ಎನ್.ಎಮ್.ಎಮ್.ಎಸ್ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗುವ ಮೂಲಕ ಪೋಷಕರು, ಶಿಕ್ಷಕರು, ಶಾಲೆ ಮಾತ್ರವಲ್ಲ ತಾಲೂಕಿಗೆ ಕೀರ್ತಿ ತಂದುಕೊಟ್ಟಿದ್ದಾರೆ.

ಇವರಿಗೆ ತಿಗಳಿಗೆ 1000 ರೂ.ನಂತೆ ವರ್ಷಕ್ಕೆ 12,000 ರೂ ಮುಂದಿನ ನಾಲ್ಕು ವರ್ಷಗಳ ವರೆಗೆ ಒಟ್ಟು 48000 ರೂ ವಿದ್ಯಾರ್ಥಿ ವೇತನ ದೊರೆಯಲಿದೆ.

ಇವರಿಗೆ ಶಾಲೆಯ ಶಿಕ್ಷಕರು ತರಬೇತಿ ನೀಡಿರುತ್ತಾರೆ.ಜೊತೆಗೆ ಇ-ಶಾಲೆ ಬೆಳ್ತಂಗಡಿ ಆನ್ಲೈನ್ ವೇದಿಕೆಯಲ್ಲಿಯೂ ತರಬೇತಿ ಪಡೆದಿದ್ದಾರೆ.

Exit mobile version