Site icon Suddi Belthangady

ಗರ್ಡಾಡಿ: ಮನನೊಂದು ಇಲಿಪಾಶಣ ಸೇವಿಸಿ ಆತ್ಮಹತ್ಯೆ

ಗರ್ಡಾಡಿ : ಜೀವನದಲ್ಲಿ ನೊಂದು ವ್ಯಕ್ತಿಯೊಬ್ಬರು ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗರ್ಡಾಡಿ ಗ್ರಾಮದ ಮಜಲು ಎಂಬಲ್ಲಿ ನಡೆದಿದೆ.ಸ್ಥಳೀಯ ನಿವಾಸಿ ಸಂಜೀವ ಪೂಜಾರಿ (60) ಮೃತಪಟ್ಟವರು. ಕೂಲಿ ಕೆಲಸ ಮಾಡಿಕೊಂಡಿದ್ದ ಇವರು ವಿಪರೀತ ಅಮಲು ಪದಾರ್ಥ ಸೇವನೆ ಮಾಡುವ ಚಟವನ್ನು ಹೊಂದಿದ್ದರು ಎಂದು ತಿಳಿದು ಬಂದಿದೆ. ಅಮಲು ಪದಾರ್ಥ ಸೇವನೆಗೆ ಹಣದ ಕೊರತೆಯಿಂದಾಗಿ ಮನನೊಂದು ಇಲಿಪಾಷಾಣ ಸೇವಿಸಿದ್ದಾರೆ. ತಕ್ಷಣ ಇವರನ್ನು ಆಸ್ಪತ್ರೆಗೆ ದಾಖಲಿಸಲಾಯ್ತಾದ್ರೂ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾರೆ.

Exit mobile version