Site icon Suddi Belthangady

ನ್ಯಾಯತರ್ಪು: ಬಿಜೆಪಿ ಪಕ್ಷದ ಮಹಾ ಸಂಪರ್ಕ ಅಭಿಯಾನ ಹಾಗೂ ಮತಯಾಚನೆ

ನಾಳ : ನ್ಯಾಯತರ್ಪು ಗ್ರಾಮದ ಬಿಜೆಪಿ ಶಕ್ತಿ ಕೇಂದ್ರಗಳ ಬೂತ್ ಸಂಖ್ಯೆ 179 ಮತ್ತು 180 ರ ಭಾರತೀಯ ಜನತಾ ಪಕ್ಷ ನ್ಯಾಯತರ್ಪು ವತಿಯಿಂದ ಮಹಾ ಸಂಪರ್ಕ ಅಭಿಯಾನ ಮತ್ತು ಪ್ರಣಾಳಿಕೆ ಪತ್ರ ನೀಡುವ ಮೂಲಕ ಮನೆ-ಮನೆಗೆ ಭೇಟಿ ನೀಡಿ ಕಾರ್ಯಕರ್ತರು ಭಾರಿ ಉತ್ಸಾಹದಿಂದ ಮತಯಾಚನೆಯನ್ನು ಎ.30 ರಂದು ಮಾಡಿದರು.

ಈ ಸಂದರ್ಭದಲ್ಲಿ ಶಕ್ತಿ ಕೇಂದ್ರ ಪ್ರಮುಖ ಉಮೇಶ್ ಕೇಲ್ದಡ್ಕ, ಲೋಕ ಸಂಪರ್ಕ ಪ್ರಮುಖು ಹಾಗೂ ಕಳಿಯ ಗ್ರಾಮ ಪಂಚಾಯತು ಸದಸ್ಯರಾದ ವಿಜಯ ಗೌಡ ಕಲಾಯಿತೊಟ್ಟು, ಚುನಾವಣಾ ಪ್ರಭಾರಿ ಕರುಣಾಕರ ಶೆಟ್ಟಿ ಕೊರಂಜ, ಧರ್ಮಸ್ಥಳ ಮಹಾ ಶಕ್ತಿ ಕೇಂದ್ರ ಪ್ರಭಾರಿ ರಾಜೇಶ್ ಪೆಂರ್ಬುಡ,179 ಬೂತ್ ಸಂಖ್ಯೆ ಅಧ್ಯಕ್ಷ ಸೋಮಪ್ಪ ಗೌಡ ಕುಬಾಯ,ಕಾರ್ಯದರ್ಶಿ ಕೆ.ಕುಶಾಲಪ್ಪ ಗೌಡ ಕಲಾಯಿತೊಟ್ಟು, 180 ಬೂತ್ ಅಧ್ಯಕ್ಷ ಸಂದೀಪ್ ಗಾಣಿಗ ನಾಳ,ಕಾರ್ಯದರ್ಶಿ ಸದಾಶಿವ ನಾಳ,ಕಳಿಯ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕಿ ಮಮತಾ ವಿ.ಆಳ್ವ ನಾಳ,ಗೇರುಕಟ್ಟೆ ಹಾಲು ಉತ್ಪಾದಕರ ಸಂಘದ ನಿರ್ದೇಶಕ ಕೆ.ಗಿರಿಯಪ್ಪ ಗೌಡ ಕಲಾಯಿತೊಟ್ಟು, ಪಕ್ಷದ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದು ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ಮಾಡಿದರು.

Exit mobile version