Site icon Suddi Belthangady

ಡಾ.ವೈ.ಉಮಾನಾಥ ಶೆಣೈಯವರಿಗೆ ‘ಆರ್ಯಭಟ ಪ್ರಶಸ್ತಿ’

ಬೆಳ್ತಂಗಡಿ: ವಿಶ್ರಾಂತ ಇತಿಹಾಸ ಪ್ರಾಧ್ಯಾಪಕ ಡಾ.ವೈ. ಉಮಾನಾಥ ಶೈಣೈಯವರಿಗೆ ಅಂತರ್ ರಾಷ್ಟ್ರೀಯ ಗೌರವದ ‘ಆರ್ಯಭಟ ಪ್ರಶಸ್ತಿ’ ಘೋಷಿತವಾಗಿದೆ.ಅದನ್ನು ಇದೇ ಮೇ ತಿಂಗಳ 25ನೇ ತಾರೀಕಿನಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದಾನ ಮಾಡಲಾಗುವುದೆಂದು – ಇಂಟರ್ ನ್ಯಾಷನಲ್ ಆರ್ಯಭಟ ಕಲ್ಚರಲ್ ಫೌಂಡೇಶನ್ ಘೋಷಣೆ ಮಾಡಿದೆ. ಇದನ್ನು ಪ್ರಮುಖವಾಗಿ ಸಾಹಿತ್ಯ ಮತ್ತು ಸಂಶೋಧನಾ ಸಾಧನೆಗಾಗಿ ಕೊಡಲಾಗಿದೆ.

ಕಾಲೇಜು ಪ್ರಾಧ್ಯಾಪಕ ಹುದ್ದೆಯಿಂದ ನಿವೃತ್ತರಾದ ಬಳಿಕ ಸದಾ ಸಂಶೋಧನೆ, ಬರವಣಿಗೆ ಹಾಗೂ ಪ್ರಾಚಿನ ಶಾಸನಗಳ ಅಧ್ಯಯನದಲ್ಲಿ ತೊಡಗಿರುವ ಡಾ.ಶೆಣೈಯವರಿಗೆ ಹಲವಾರು ಸಂಘ – ಸಂಸ್ಥೆಗಳು ವಿದ್ಯಾಪೀಠಗಳು ಇದೇ ರೀತಿ ಸನ್ಮಾನಿಸಿ ಗೌರವಿಸಿದ್ದವು.

Exit mobile version