Site icon Suddi Belthangady

ರೇಷ್ಮೆರೋಡ್: ಶ್ರೀ ಪಾರ್ಶ್ವನಾಥ ಫ್ಯೂಯಲ್ ಪ್ರಾರಂಭೋತ್ಸವ

ಗೇರುಕಟ್ಟೆ: ಇಲ್ಲಿಯ ರೇಷ್ಮೆ ರೋಡ್ ಶ್ರೀ ಪಾರ್ಶ್ವನಾಥ ಫ್ಯೂಯಲ್ ಪ್ರಾರಂಭೋತ್ಸವ ಎ.27 ರಂದು ಪ್ರಾರಂಭೋತ್ಸವ ನಡೆಯಿತು.

ಮೂಡಬಿದಿರೆ ಜೈನಮಠದ ಭಾರತ ಭೂಷಣ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾ ಸ್ವಾಮಿ ಆಗಮಿಸಿ ಆಶೀರ್ವಚನ ಮಾಡಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಡಿ.ಹರ್ಷೇಂದ್ರ ಕುಮಾರ್ ಶ್ರೀ ಪಾರ್ಶ್ವನಾಥ ಪ್ಯೂಯಲ್ ಉದ್ಘಾಟನೆ ಮಾಡುವ ಮೂಲಕ ಚಾಲನೆ ನೀಡಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಅಳದಂಗಡಿ ಅರಮನೆ ಡಾ| ಪದ್ಮಪ್ರಸಾದ ಅಜಿಲರು, ಉಜಿರೆ ಬ್ಯಾಂಕ್ ಆಫ್ ಬರೋಡ ಸೀನಿಯರ್ ಮೆನೇಜರ್ ಪ್ರಸಾದ ಎನ್., ಮಂಗಳೂರು ಎಂ.ಆರ್.ಪಿ.ಎಲ್.ಮಾರ್ಕೆಟಿಂಗ್ ಚೀಫ್ ಮೆನೇಜರ್ ಸ್ವಾಮಿ ಪ್ರಸಾದ್, ವ್ಯವಸ್ಥಾಪಕರಾದಪ್ರವೀಣ್ ಕುಮಾರ್ ಇಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದು , ವಾಹನ ಮಾಲೀಕರು ಹಾಗೂ ಚಾಲಕರು ಶ್ರೀ ಪಾರ್ಶ್ವನಾಥ ಫ್ಯೂಯಲ್ ಸಂಸ್ಥೆಯೊಂದಿಗೆ ಕೈಜೋಡಿಸಿ ಸಹಕರಿಸಿ ಬೇಕು ಎಂದು ಹೇಳಿದರು.ವಿವಿಧ ಇಲಾಖೆಯ ಅಧಿಕಾರಿಗಳು, ಉದ್ಯಮಿಗಳು, ವಾಹನ ಮಾಲಕರು,ಚಾಲಕರು ಬಾಗವಹಿಸಿದರು.ಸಂಸ್ಥೆಯ ಮಾಲೀಕರಾದ ಸತ್ಯ ಪ್ರಸಾದ್ ವಿ.ಜೈನ್, ಅತಿಥಿ, ಗಣ್ಯರನ್ನು ಮತ್ತು ಹಿತೈಷಿಗಳನ್ನು ಸ್ವಾಗತಿಸಿ, ಸತ್ಕರಿಸಿದರು.

Exit mobile version