Site icon Suddi Belthangady

ಬೆಳ್ತಂಗಡಿ: ನೇಣು ಬಿಗಿದು ಯುವಕ ಆತ್ಮಹತ್ಯೆ

ಬೆಳ್ತಂಗಡಿ: ಒಡಿಶಾ ಮೂಲದ ಕಾರ್ಮಿಕನೋರ್ವ ಬಾಡಿಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಜಿರೆ ಗ್ರಾಮದ ಅಜಿತ ನಗರ ಎಂಬಲ್ಲಿ ನಡೆದಿದೆ.

ಒಡಿಶಾ ರಾಜ್ಯ ಕಂದಾವರಾ ಗೋಬಿಂದ ರಾವುತ್ ಮೃತಪಟ್ಟ ಯುವಕ ಎಂದು ತಿಳಿದುಬಂದಿದೆ.ಗೋಬಿಂದ ರಾವುತ್ ಉಜಿರೆ ಗ್ರಾಮದ ಫೈಬರ್ ವಸ್ತುಗಳಿಂದ ನಿರ್ಮಿಸುವ ಗೃಹೋಪಯೋಗಿ ವಸ್ತುಗಳ ನಿರ್ಮಾಣದ ಮಳಿಗೆಯಲ್ಲಿ ಹೆಲ್ಪರ್ ಕೆಲಸ ಮಾಡಿಕೊಂಡಿದ್ದ.

ಸ್ಥಳೀಯ ಅಜಿತ ನಗರ ಎಂಬಲ್ಲಿರುವ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಗೋಬಿಂದ ರಾವುತ್ ಎ.25ರಂದು ರಾತ್ರಿ ಯಾವುದೋ ವೈಯಕ್ತಿಕ ಕಾರಣದಿಂದ ಜೀವನದಲ್ಲಿ ನೊಂದು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version