Site icon Suddi Belthangady

ತೋಟತ್ತಾಡಿಯಲ್ಲಿ ನದಿಗೆ ಸ್ನಾನಕ್ಕೆ ಹೋಗಿದ್ದ ವ್ಯಕ್ತಿ ನಾಪತ್ತೆ ಪ್ರಕರಣ – ಇಂದು ಶವವಾಗಿ ಜೈಸನ್.ಪಿ.ಎಂ ಪತ್ತೆ

ನೆರಿಯ: ಸ್ನಾನಕ್ಕೆ ತೆರಳಿದ ವ್ಯಕ್ತಿ ಹೊಳೆಯಲ್ಲಿ ಮುಳುಗಿ ನಾಪತ್ತೆಯಾಗಿದ್ದ ತೋಟತ್ತಾಡಿ ನಿವಾಸಿ ಜೈಸನ್ ಪಿ ಎಂ ಶವವಾಗಿ ಪತ್ತೆಯಾಗಿದ್ದಾರೆ. ಅಣಿಯೂರು ನದಿಯಲ್ಲಿ ಪುದುವೆಟ್ಟು ಸಮೀಪ ಜೈಸನ್ ರವರ ಶವ ಪತ್ತೆಯಾಗಿದ್ದು, ತೀವ್ರ ಹುಡುಕಾಟದ ನಂತರ ಶವ ಪತ್ತೆಯಾಗಿದೆ.


ಘಟನೆಯ ಬಗ್ಗೆ ಮನೆಯವರ ಅಭಿಪ್ರಾಯವೇನು, ಸಾರ್ವಜನಿಕರ ಅಭಿಪ್ರಾಯವೇನು ಅನ್ನುವುದು ಇನ್ನಷ್ಟೇ ತಿಳಿದುಬರಬೇಕಿದ್ದು, ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಹೆಚ್ಚಿನ ತನಿಖೆಯ ನಂತರ ಸಾವಿಗೆ ನಿಖರ ಕಾರಣ ತಿಳಿದುಬರಬೇಕಿದೆ.

Exit mobile version