Site icon Suddi Belthangady

ಮಡಂತ್ಯಾರು: ಶರಸೇತುಬಂಧ ತಾಳಮದ್ದಳೆ ಕಾರ್ಯಕ್ರಮ

ಮಡಂತ್ಯಾರು: ಮಹಿಷಮರ್ದಿನಿ ಯಕ್ಷಗಾನ ಸಂಘದ ವತಿಯಿಂದ ಮಂಗಳವಾರ ಏ.೮ರಂದು ತಾಳಮದ್ದಳೆ ಕಾರ್ಯಕ್ರಮ ಮಡಂತ್ಯಾರು ಗ್ರಾಮ ಪಂಚಾಯತ್ ಸಮುದಾಯ ಭವನದಲ್ಲಿ ನಡೆಯಿತು.”ಶರಸೇತು ಬಂಧ” ಪ್ರಸಂಗದಲ್ಲಿ ಕಿಶೋರ್ ಕುಮಾರ್ ಶೆಟ್ಟಿ, ಗಣೇಶ್ ದಿವಾಕರ ಶೆಟ್ಟಿ ಭಾಗವತಿಕೆಯನ್ನು ಮಾಡಿದರು.‌ಯೋಗೀಶ್ ಆಚಾರ್ಯ ಮತ್ತು ದೇವಿಪ್ರಸಾದ್ ಮದ್ದಳೆಯಲ್ಲಿ, ಹಾಗೂ ಚಂಡೆಯಲ್ಲಿ ಅತುಲ್ ಕೃಷ್ಣ,ಶ್ರೀಪತಿ ಭಟ್ ಭಾಗವಹಿಸಿದರು.ವಾಸುದೇವ ಪ್ರಭು, ಭರತ ಶೆಟ್ಟಿ, ನಾಗೇಶ ಎಂ ಪಿ.ಡಿ.ಓ. ವೇಣೂರು ಅರ್ಥದಾರಿಕೆಯಲ್ಲಿ ಪಾತ್ರವರ್ಗ ನಿರ್ವಹಿಸಿದರು. ಕಲಾಭಿಮಾನಿಗಳು ನೆರೆದಿದ್ದರು.

Exit mobile version