Site icon Suddi Belthangady

ಬೈಕ್ ಅಪಘಾತ: ಪ್ರಭಾಕರ ಆಚಾರ್ಯ ನಿಧನ

ಬೆಳ್ತಂಗಡಿ: ಮಂಗಳೂರು ಮಾಂಡೋವಿ ಮೋಟಾರ್ಸ್ ನಲ್ಲಿ ಪ್ರಭಾಕರ ಆಚಾರ್ಯ 10 ವರ್ಷಗಳಿಂದ ಸೆಕ್ಯೂರಿಟಿಯಾಗಿದ್ದ ಬೆಳ್ತಂಗಡಿ ತಾಲೂಕಿನ ಮುಂಡೂರು ನಿವಾಸಿ ಪ್ರಭಾಕರ ಆಚಾರ್ಯ (56ವ) ಮಂಗಳೂರಿನಲ್ಲಿ ನಡೆದ ಬೈಕ್ ಎ.11ರಂದು ನಿಧನರಾದರು.

ಎಂದಿನಂತೆ ಬೆಳಿಗ್ಗೆ ಕರ್ತವ್ಯಕ್ಕೆ ಹಾಜರಾಗಬೇಕಿದ್ದ ಪ್ರಭಾಕರ ಆಚಾರ್ಯ ರವರು ಎ.ಜೆ ಆಸ್ಪತ್ರೆಯ ಹತ್ತಿರ ಬೈಕ್ ಸ್ಕಿಡ್ ಆಗಿ ಗಂಭೀರ
ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು.

ಮೃತರು ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಅಪಾರ ಪ್ರಮಾಣದ ಕುಟುಂಬಸ್ಥರನ್ನು ಆಗಲಿದ್ದಾರೆ.

Exit mobile version