Site icon Suddi Belthangady

ಧರ್ಮಸ್ಥಳದ ಪೂರ್ಜೆಬೈಲಿನಲ್ಲಿ ಗಾಂಜ ಸೇವನೆ ಮಾಡಿದ್ದ ಇರ್ಫಾನ್ ವಶಕ್ಕೆ – ಆರೋಪ ಸಾಬೀತು

ಧರ್ಮಸ್ಥಳ- ಏಪ್ರಿಲ್ 10ರಂದು ಧರ್ಮಸ್ಥಳದ ಪೂರ್ಜೆಬೈಲು ಎಂಬಲ್ಲಿ ರಸ್ತೆಯ ಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ರಂಮ್ಲನ್ ಯಾನೆ ಇರ್ಫಾನ್ (25) ಎಂಬಾತ ಗಾಂಜ ಸೇವನೆ ಮಾಡಿರುವ ಅನುಮಾನದಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಧರ್ಮಸ್ಥಳ ಠಾಣೆಯ ಸಬ್ ಇನ್ಸ್ ಪೆಕ್ಟರ್ ಅನಿಲ್ ಕುಮಾರ್ ಇರ್ಫಾನ್ ನನ್ನು ವಶಕ್ಕೆ ಪಡೆದರು.ಪಟ್ರಮೆಯ ಪಟ್ಟೂರಿನ ಖಾಸಿಂ ಎಂಬವರ ಪುತ್ರನಾದ ಇರ್ಫಾನ್ ನನ್ನು ವಶಕ್ಕೆ ಪಡೆದು, ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಯ ವೈದ್ಯಾಧಿಕಾರಿ ಮುಂದೆ ಹಾಜರುಪಡಿಸಿದ್ದರು, ಪರೀಕ್ಷೆಯ ವೇಳೆ ಆತ ನಿಷೇದಿತ ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವುದಾಗಿ ದೃಢಪತ್ರ ನೀಡಿರುತ್ತಾರೆ.ಈ ಕುರಿತು ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Exit mobile version