Site icon Suddi Belthangady

ತಾಲೂಕಿನಾದ್ಯಂತ ಚರ್ಚ್ ಗಳಲ್ಲಿ ಪವಿತ್ರ ಪಾಸ್ಕ ಹಬ್ಬ ಆಚರಣೆ

ಬೆಳ್ತಂಗಡಿ : ಕ್ರೈಸ್ತರಿಗೆ ಕಪ್ಪು ತಿಂಗಳು ಪ್ರಾರಂಭ ಗೊಂಡು ಪವಿತ್ರ ಶುಕ್ರವಾರದಂದು ಕೊನೆಗೊಳ್ಳುತ್ತದೆ. ಇಂದು ಎ.8ರಂದು ಶನಿವಾರ ರಾತ್ರಿ ತಾಲೂಕಿನ ಎಲ್ಲಾ ಚರ್ಚ್ ಗಳಲ್ಲಿ ಪವಿತ್ರ ಪಾಸ್ಕ ಹಬ್ಬದ ಆಚರಣೆ ನಡೆಯಿತು.

ಸಂದರ್ಭದಲ್ಲಿ ಬೆಳಕು, ಬೆಂಕಿ ಹಾಗೂ ಹೊಸ ನೀರಿನ ಶುಧೀಕರಣ ವಿಧಿ ವಿಧಾನ ನಡೆದವು.ಉಜಿರೆ ಸಂತ ಅಂತೋಣಿ ಚರ್ಚ್ ನಲ್ಲಿವ. ಫಾ. ಜೇಮ್ಸ್ ಡಿಸೋಜಾ ನೆರವೇರಿಸಿದರು.

ಉಜಿರೆ ಅನುಗ್ರಹ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವ. ಫಾ ವಿಜಯ್ ಲೋಬೊ ಪ್ರಧಾನ ದಿವ್ಯ ಬಲಿ ಪೂಜೆ ಅರ್ಪಿಸಿ ಪ್ರವಚನ ನೀಡಿದರು.

ಉಜಿರೆ ದಯಾಳ್ ಭಾಗ್ ಆಶ್ರಮದ ಗುರುಗಳು ಉಪಸ್ಥಿತರಿದ್ದರು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Exit mobile version