Site icon Suddi Belthangady

ಪಟ್ಟೂರು ಯುವತಿಯರ ಅನುಮಾನಾಸ್ಪದ ಸಾವು ಪ್ರಕರಣ-ಮನೆಗಳಿಗೆ ಭೇಟಿ ನೀಡಿದ ಶಾಸಕ ಪೂಂಜ-ಸೂಕ್ತ ತನಿಖೆಗೆ ಒತ್ತಾಯ

ಪಟ್ರಮೆ: ಇಲ್ಲಿನ ಪಟ್ಟೂರು ನಿವಾಸಿಗಳಾದ, ಸ್ನೇಹಿತೆಯರಾದ ರಕ್ಷಿತಾ ಮತ್ತು ಲಾವಣ್ಯರ ಅನುಮಾನಾಸ್ಪದ ಸಾವು ತಾಲೂಕಿನಲ್ಲಿ ಸಂಚಲನ ಮೂಡಿಸಿದೆ.ಮೃತರ ಮನೆಗಳಿಗೆ ಭೇಟಿ ನೀಡಿದ ಶಾಸಕ ಹರೀಶ್ ಪೂಂಜ ಮನೆಯವರಿಗೆ ಸಾಂತ್ವನ ಹೇಳಿದರು.
ಉಭಯ ಮನೆಗಳಲ್ಲೂ ಮನೆಯವರ ಮಾತು ಆಲಿಸಿದ ಶಾಸಕರು, ಮನೆಯವರಿಗೆ ಸಮಾಧಾನ ತಿಳಿಸಿದರು.


ಈ ವೇಳೆ ಸುದ್ದಿಗೆ ಮಾತನಾಡಿದ ಶಾಸಕ ಹರೀಶ್ ಪೂಂಜ “ಇಬ್ಬರು ತರುಣಿಯರ ಅನುಮಾನಾಸ್ಪದ ಸಾವಿನ ಸೂಕ್ತ ತನಿಖೆಗೆ ಒತ್ತಾಯಿಸುತ್ತೇನೆ. ಅಲ್ಲದೇ, ಇದರ ಹಿಂದೆ ಷಡ್ಯಂತ್ರ ನಡೆದಿದ್ದರೆ ಅದು ಹೊರಬರಬೇಕು ಎಂದು ಹೇಳಿದರು.ಕಡುಬಡತನದಲ್ಲಿರುವ ಯುವತಿಯರ ಮನೆಯವರಿಗೆ ಪರಿಹಾರ ಒದಗಿಸುವ ಕುರಿತು ಸುದ್ದಿಬಿಡುಗಡೆ ಪ್ರತಿನಿಧಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕ ಹರೀಶ್ ಪೂಂಜ ಚುನಾವಣಾ ನೀತಿಸಂಹಿತೆ ಇರುವುದರಿಂದ ಯಾವುದೇ ವೈಯಕ್ತಿಕ ಪರಿಹಾರ ಘೋಷಣೆ ಮಾಡದೇ, ಮಾನವೀಯ ನೆಲೆಯಲ್ಲಿ ಎರಡೂ ಮನೆಯವರಿಗೆ ಸರ್ಕಾರದ ಕಡೆಯಿಂದ ನೆರವು ಒದಗಿಸಲಾಗುವುದಾದರೆ ಅದನ್ನು ಮಾಡಿಸುತ್ತೇನೆ” ಎಂದರು.

ಈ ವೇಳೆ ಕೊಕ್ಕಡ ಗ್ರಾಮ ಪಂಚಾಯತ್ ಅಧ್ಯಕ್ಷ ಯೋಗೀಶ್, ಮತ್ತಿತರರು ಉಪಸ್ಥಿತರಿದ್ದರು.

Exit mobile version