Site icon Suddi Belthangady

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಪ್ರವೀಣ್ ಚಂದ್ರ ಜೈನ್ ನೇಮಕ

ಬೆಳ್ತಂಗಡಿ: ಜನತಾದಳ ಜಾತ್ಯತೀತ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಪ್ರವೀಣ್‌ಚಂದ್ರ ಜೈನ್ ಅವರನ್ನು ನೇಮಕಗೊಳಿಸಿ ಜೆಡಿಎಸ್ ರಾಜ್ಯಾಧ್ಯಕ್ಷ, ‌ಮಾಜಿ‌‌ ಕೇಂದ್ರ ಸಚಿವ ಸಿ.ಎಂ ಇಬ್ರಾಹಿಂ ಆದೇಶ‌ ನೀಡಿದ್ದಾರೆ.‌
ಸಿಎಲ್‌ಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರ ಸ್ವಾಮಿ ಅವರ ಶಿಫಾರಸ್ಸಿನ ಮೇರೆಗೆ ಈ‌ ನೇಮಕಾತಿ‌‌ ನಡೆದಿದೆ. ಜೊತೆಗೆ ಉಡುಪಿ‌ ಜಿಲ್ಲಾ ಉಸ್ತುವಾರಿಯಾಗಿಯೂ ಅವರನ್ನು ನೇಮಿಸಲಾಗಿದೆ.
ಪ್ರವೀಣ್ ಚಂದ್ರ ಜೈನ್ ಅವರು ಈ‌ಹಿಂದೆ ತಾಲೂಕು ಅಧ್ಯಕ್ಷರಾಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿ, ಒಂದು ಅವಧಿಯಲ್ಲಿ ವಿಧಾನ ಪರಿಷತ್ ಅಭ್ಯರ್ಥಿಯಾಗಿ ಸೇರಿದಂತೆ ದೀರ್ಘ ವರ್ಷದಿಂದ ಪಕ್ಷದಲ್ಲಿ‌ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ.

Exit mobile version