Site icon Suddi Belthangady

ವೇಣೂರಿನಲ್ಲಿ ಶ್ರೀ ವೆಂಕಟರಮಣ ಕ್ರೆಡಿಟ್‌ ಕೊ- ಆಪರೇಟಿವ್ ಸೊಸೈಟಿ 21ನೇ ಶಾಖೆಯ ಶುಭಾರಂಭ

ವೇಣೂರು : ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೊ-ಅಪರೇಟಿವ್ ಸೊಸೈಟಿಯ 21ನೇ ಶಾಖೆಯು ಎ.2 ರಂದು ಪ್ರಾರಂಭವಾಯಿತು.ಕಚೇರಿ ಉದ್ಘಾಟನೆಯನ್ನು ಮಂಗಳೂರು ವಿ.ಜಿ.ಎಸ್.ಸೌಹಾರ್ದ ಸಹಕಾರಿ ನಿಯಮಿತ ಅಧ್ಯಕ್ಷ ರಾದ ಲೋಕಯ್ಯ ಗೌಡ ಕೆ. ನೆರವೇರಿಸಿದರು.

ಬೆಳ್ತಂಗಡಿ ತಾಲೂಕು ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಪಿ. ತಿಮ್ಮಪ್ಪ ಗೌಡ ಬೆಳಾಲು ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು.ಗಣಕೀಕರಣ ಉದ್ಘಾಟನೆ ಯನ್ನು ವೇಣೂರು ಬಳ್ಳಾಲ್ ಪ್ಯೂಯೆಲ್ ಮತ್ತು ಸರ್ವಿಸ್ ಸಂಸ್ಥೆಯ ಮಾಲೀಕರಾದ ನವೀನ್ ಚಂದ್ರ ಬಳ್ಳಾಲ್ ಚಾಲನೆ ನೀಡಿದರು.ಪ್ರಥಮ ಠೇವಣಿ ಪತ್ರ ವಿತರಣೆ ಯನ್ನು ಮಂಜು ಶ್ರೀ ಕಾಂಪ್ಲೆಕ್ಸ್ ಮಾಲೀಕರಾದ ಕೆ.ಉದಯ ಕುಮಾರ್ ಕಂಬಳಿ ಬಿಡುಗಡೆ ಮಾಡಿದರು. ಸುಳ್ಯ ವೆಂಕಟರಮಣ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಅಧ್ಯಕ್ಷ ಪಿ.ಸಿ.ಜಯರಾಮ ಸಭಾಧ್ಯಕ್ಷತೆ ವಹಿಸಿದ್ದರು.

ವೆಂಕಟರಮಣ ಸೊಸೈಟಿ ಉಪಾಧ್ಯಕ್ಷ ಮೋಹನ್ ರಾಂ ಸುಳ್ಯ, ನಿರ್ದೇಶಕರಾದ ನಿತ್ಯನಂದ ಮುಂಡ್ಡೋಡಿ,ಜಾಕೆ ಸದಾನಂದ,ಕೆ.ಸಿ.ನಾರಾಯಣ ಗೌಡ, ಚಂದ್ರಾ ಕೋಲ್ಚಾರ್,ಕೆ.ಸಿ ಸದಾನಂದ, ಪಿ.ಎಲ್.ಗಂಗಾಧರ ಹಾಗೂ ಸಂಘದ ಆಡಳಿತ ಮಂಡಳಿ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬೆಳ್ತಂಗಡಿ ವಾಣಿ ಶಿಕ್ಷಣ ಸಂಸ್ಥೆಯ ಸ್ಥಾಪಕ ಸದಸ್ಯೆ ಶ್ರೀಮತಿ ಲೋಕೇಶ್ವರಿ ವಿನಯ ಚಂದ್ರ ವಲಂಬ್ರ,ಬೆಳ್ತಂಗಡಿ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ ಕಡಿರುದ್ಯಾವರ,ಮುಂಡಾಜೆ ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ವ್ಯವಸ್ಥಾಪಕ ಶಿವಯ್ಯ ಗೌಡ, ಶ್ರೀ ವೆಂಕಟರಮಣ ಬ್ಯಾಂಕ್ ವಿವಿಧ ಶಾಖೆಯ ಮುಖ್ಯಸ್ಥ ಸಿಬ್ಬಂದಿಗಳು, ವೇಣೂರು ಸ್ಥಳೀಯ ಗ್ರಾಹಕರು ಉಪಸ್ಥಿತರಿದ್ದರು.

Exit mobile version