Site icon Suddi Belthangady

ಶ್ರವಣಬೆಳಗೊಳ ಜೈನ ಮಠದ ನೂತನ ಪೀಠಾಧ್ಯಕ್ಷ ಪೂರ್ವಾಶ್ರಮದಲ್ಲಿ ಉಜಿರೆ ಎಸ್ ಡಿ.ಎಂ. ಪ.ಪೂ.ಕಾಲೇಜು ವಿದ್ಯಾರ್ಥಿ

ಉಜಿರೆ: ಶ್ರೀ ಕ್ಷೇತ್ರ ಶ್ರವಣಬೆಳಗೊಳ ಜೈನ ಮಠದ ಪೀಠಾಧ್ಯಕ್ಷರಾಗಿದ್ದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಕೀರ್ತಿಶೇಷರಾದ ಹಿನ್ನೆಲೆಯಲ್ಲಿ  ಅವರಿಂದಲೇ ಉತ್ತರಾಧಿಕಾರಿಯಾಗಿ ದೀಕ್ಷಿತರಾಗಿದ್ದ ಸ್ವಸ್ತಿ ಶ್ರೀ ಆಗಮ ಕೀರ್ತಿ ಸ್ವಾಮೀಜಿಯವರಿಗೆ ಮಾ 27 ರಂದು ನೂತನ ಪೀಠಾಧ್ಯಕ್ಷರಾಗಿ ಪಟ್ಟಾಭಿಷೇಕ ನೆರವೇರಿಸಲಾಯಿತು. ಅಂದು ಪ್ರಾತಃಕಾಲ ಅವರಿಗೆ ಮಂಗಲ ಸ್ನಾನ,  ಜಿನಮಂದಿರ ದರ್ಶನ, ಪಟ್ಟಬಂಧ, ಮಂಗಲಕಲಶಗಳ ಸ್ಥಾಪನೆ, ಜಪ, ತಪ, ಧ್ಯಾನ, ಸಕಲೀಕರಣದೊಂದಿಗೆ ಪಟ್ಟಾಭಿಷೇಕ ನೆರವೇರಿತು. 

ಆಗಮ ಇಂದ್ರ ಮೂಲ ಹೆಸರಿನ ಅವರು ಪೂರ್ವಾಶ್ರಮದಲ್ಲಿ ಉಜಿರೆಯ  ಸಿದ್ದವನ ಗುರುಕುಲದಲ್ಲಿದ್ದು ಶ್ರೀ ಧ ಮಂ ,ಪದವಿ ಪೂರ್ವ  ಕಾಲೇಜಿನಲ್ಲಿ 2017-19 ರ ಅವಧಿಯಲ್ಲಿ ಪದವಿ ಪೂರ್ವ  ಶಿಕ್ಷಣವನ್ನು ವಾಣಿಜ್ಯ ವಿಭಾಗದಲ್ಲಿ  ಪಡೆದಿದ್ದರು. ಅವರ ತಾಯಿ ಉಜಿರೆಯವರು.

Exit mobile version