Site icon Suddi Belthangady

ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕುಮಾರಚಂದ್ರ ಕರ್ತವ್ಯಕ್ಕೆ ಹಾಜರ್

ಬೆಳ್ತಂಗಡಿ: ಮಂಗಳೂರಿನಲ್ಲಿ ಆಡಿಷನಲ್ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದ ಕುಮಾರಚಂದ್ರ ಅವರು ಕಾರವಾರಕ್ಕೆ ವರ್ಗಾವಣೆಯಾಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಬಳ್ಳಾರಿ, ವಿರಾಜಪೇಟೆ, ಹೊಸಪೇಟೆ, ಉಡುಪಿ, ದ.ಕ.ಜಿಲ್ಲೆ ಹಾಗೂ ರಾಜ್ಯದ ವಿವಿಧೆಡೆಗಳಲ್ಲಿ ಆಡಿಷನಲ್ ಎಸ್ಪಿಯಾಗಿ ಕುಮಾರ ಚಂದ್ರರವರು ಕರ್ತವ್ಯ ನಿರ್ವಹಿಸಿದ್ದಾರೆ. ಸುಮಾರು 18 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ, ಕರ್ತವ್ಯದಿಂದ ನಿವೃತ್ತರಾಗಿ ಪೊಲೀಸ್ ಹುದ್ದೆಗೆ ಸೇರ್ಪಡೆಗೊಂಡು ಹಲವಾರು ಪ್ರಮುಖ ಪ್ರಕರಣಗಳನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರು ಮೂಲತಃ ಕಲ್ಲಡ್ಕದವರಾಗಿದ್ದು, ಬೆಳ್ತಂಗಡಿ ಚರ್ಚ್‌ರೋಡ್ ಸಮೀಪ ಪತ್ನಿ ಲತಾ ಮತ್ತು ಮಗಳು ಅನುಷಾ ಅವರೊಂದಿಗೆ ನೆಲೆಸಿದ್ದಾರೆ.

Exit mobile version