Site icon Suddi Belthangady

ಎನ್. ಪಿ. ಎಸ್. ನೌಕರರಿಂದ ವೋಟ್ ಫಾರ್ ಓಪಿಎಸ್ ಅಭಿಯಾನ

ಬೆಳ್ತಂಗಡಿ :ಕರ್ನಾಟಕ ರಾಜ್ಯ ಸರಕಾರಿ ಎನ್.ಪಿ.ಎಸ್.ನೌಕರರ ಸಂಘದ ಸೂಚನೆಯಂತೆ, ಮಾ.28 ರಂದು ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ವೋಟ್ ಫಾರ್ ಓಪಿಎಸ್ ಎಂಬ ಅಭಿಯಾನವನ್ನು ಯಶಸ್ವಿಯಾಗಿ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಇಬ್ರಾಹಿಂ ಪಾಲ್ಗೊಂಡು ಅಭಿಯಾನದ ಹಿನ್ನೆಲೆ, ಉದ್ದೇಶಗಳನ್ನು ನೌಕರರಿಗೆ ತಿಳಿಸಿ, ಯಶಸ್ವಿಗೊಳಿಸಲು ಕೋರಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆದರ್ಶ ಕಟ್ಟಿನಮಕ್ಕಿ ಪೋಸ್ಟರ್ ಬಿಡುಗಡೆ ಮಾಡಿದರು. ತಾಲೂಕು ಘಟಕದ ಅಧ್ಯಕ್ಷ ಸುರೇಶ್ ಮಾಚಾರ್ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯದರ್ಶಿ ಸೀತಾರಾಮ ಬೆಳಾಲ್,ಸಂಘಟನಾ ಕಾರ್ಯದರ್ಶಿ ಪರಮೇಶ್ ಸಹಕರಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ತಾಲೂಕು ಕಂದಾಯ ಮತ್ತು ಸರ್ವೆ ಇಲಾಖೆಯ ನೌಕರರು ಮತ್ತು ಶಿಕ್ಷಣ ಸೇರಿದಂತೆ ಇತರ ಇಲಾಖೆಯ ನೌಕರರು ಭಾಗವಹಿಸಿದ್ದರು.

Exit mobile version