Site icon Suddi Belthangady

ಧರ್ಮಸ್ಥಳ ಎಸ್‌ಡಿಎಂ ಆಂ.ಮಾ. ಶಾಲೆಯಲ್ಲಿ ಸಮ್ಮರ್ ಪಾರಡೈಸ್ ಬೇಸಿಗೆ ಶಿಬಿರ

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಾ.31 ರ ವರೆಗೆ ನಡೆಯುವ ಸಮ್ಮರ್ ಪಾರಡೈಸ್ ಬೇಸಿಗೆ ಶಿಬಿರ ಉದ್ಘಾಟನೆ ನಡೆಯಿತು.
ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸತೀಶ್ಚಂದ್ರ ಉದ್ಘಾಟಿಸಿದರು‌.
ಹೊಸತನವನ್ನು ಅರಿಯಲು, ಕ್ರಿಯಾಶೀಲತೆ ಮೈ ಗೂಡಿಸಿಕೊಳ್ಳಲು ಅರಿತು ಬಾಳಲು ಇಂತಹಾ ಶಿಬಿರಗಳು ಪೂರಕ ಎಂದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸೋಮಶೇಖರ ಶೆಟ್ಟಿ ಶುಭ ಹಾರೈಸಿದರು. ಮುಖ್ಯೋಪಾಧ್ಯಾಯಿನಿ ಪರಿಮಳಾ ಎಂ ವಿ. ಮಾತನಾಡಿದರು.


ಶಿಬಿರದಲ್ಲಿ 7 ಪ್ರಕಾರದ ತರಬೇತಿಗಳಿದ್ದು ಕಲಾವಿಭಾಗ, ಜೀನ್ಸ್ ಬ್ಯಾಗ್ ತಯಾರಿ, ಕಿವಿಯೋಲೆ ತಯಾರಿ ,ಹಸಿರು ತಂಡ, ಆರೋಗ್ಯ ವಿಭಾಗ ಇತ್ಯಾದಿ ವಿವಿಧ ತಂಡಗಳಾಗಿ ವಿಂಗಡಿಸಿ ಆಯೋಜಿಸಲಾಗಿದೆ. ವಿದ್ಯಾರ್ಥಿ ಉಪನಾಯಕನಾಗಿರುವ ಮಾಸ್ಟರ್ ಜಸ್ಟಿನ್ ನಿರೂಪಿಸಿದರು. ಸಾನ್ವಿ ಸ್ವಾಗತಿಸಿ, ಧನ್ಯವಾದವಿತ್ತರು. ಶಾಲಾ ಸಂಚಾಲಕ ಅನಂತಪದ್ಮನಾಭ ಭಟ್ ವೀಕ್ಷಕರಾಗಿದ್ದರು.
ಶಾಲಾ ಶಿಕ್ಷಕರ ವೃಂದ ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಸಾಕ್ಷಿಗಳಾದರು.

Exit mobile version