Site icon Suddi Belthangady

ನಾವೂರು ಗ್ರಾ.ಪಂ. ಪ್ರಜಾಸೌಧ ಉದ್ಘಾಟನೆ

ನಾವೂರು: ನಾವೂರು ಗ್ರಾಮ ಪಂಚಾಯತ್ ನೂತನ ಕಟ್ಟಡ ಪ್ರಜಾಸೌಧ ಸುಮಾರು ರೂ.1 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು ಶಾಸಕ ಹರೀಶ್ ಪೂಂಜ ಮಾ.25ರಂದು ಶಾಸಕ ಕಟ್ಟಡ ಉದ್ಘಾಟನೆ ಮಾಡಿದರು.

ಅಧ್ಯಕ್ಷತೆಯನ್ನು ನಾವೂರು ಗ್ರಾ.ಪಂ ಅಧ್ಯಕ್ಷ ಗಣೇಶ್ ಗೌಡ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಶಾಸಕ ಕೆ. ಹರೀಶ್ ಕುಮಾರ್, ಕರ್ನಾಟಕ ವಿದ್ಯುನ್ಮಾನ ಅಭಿವೃದ್ಧಿ ನಿಗಮದ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಬೆಳ್ತಂಗಡಿ ಅಕ್ರಮ ಸಕ್ರಮ ಸಮಿತಿ ಸದಸ್ಯ ಕೆ. ಜಯಂತ್ ಕೋಟ್ಯಾನ್, ನಾವೂರು ಆರೋಗ್ಯ ಕ್ಲಿನಿಕ್‌ನ ಡಾ.ಪ್ರದೀಪ್ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ತಾ. ಪಂ. ಮುಖ್ಯಕಾರ್ಯನಿರ್ವಾಧಿಕಾರಿ ಕುಸುಮಾಧರ ಬಿ, ನಾವೂರು ಗೋಪಾಲಕೃಷ್ಣ ದೇವಸ್ಥಾನ ದ ಅಧ್ಯಕ್ಷ ಹರೀಶ್ ಸಾಲ್ಯಾನ್, ನಾವೂರು ಮುಹಿಯುದ್ದೀನ್ ಖತೀಬರು ಹಮೀದ್ ಸಖಾಫಿ, ಇಂದಬೆಟ್ಟು ಚರ್ಚ್ ನ ಧರ್ಮಗುರು ಸ್ಟೀವನ್ ಡಿಸೋಜ, ಲಾಯಿಲ ಜಿ.ಪಂ. ಮಾಜಿ ಸದಸ್ಯೆ ಸೌಮ್ಯಲತಾ ಜಯಂತ ಗೌಡ, ತಾ.ಪಂ. ಮಾಜಿ ಉಪಾಧ್ಯಕ್ಷೆ ವೇದಾವತಿ , ನಾವೂರು ಗ್ರಾ.ಪಂ. ಉಪಾಧ್ಯಕ್ಷೆ ಸುನಂದ, ನಾವೂರು ಬಾಲಯೇಸು ದೇವಾಲಯದ ಧರ್ಮಗುರು ಜೋಜಿ ವಡಕೇವೀಟಿಲ್, ನಾವೂರು ಗ್ರಾ.ಪಂ. ಮಾಜಿ ಅಧ್ಯಕ್ಷೆ ಲಲಿತಾ ಪಂ. ಅಭಿವೃದ್ಧಿ ಅಧಿಕಾರಿ ಕೆ. ವೆಂಕಟಕೃಷ್ಣ ರಾಜ, ಕಾರ್ಯದರ್ಶಿ ನಿರ್ಮಲ್ ಕುಮಾರ್ , ನಾವೂರು ಗ್ರಾ.ಪಂ. ಸರ್ವಸದಸ್ಯರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮವು ನಾವೂರು, ಹೊಡಿಕ್ಕಾರು ಅಲೆಕ್ಕಿ, ಅಂಗನವಾಡಿ ಮಕ್ಕಳು, ಹಾಗೂ ಕಿರಿಯ ಪ್ರಾಥಮಿಕ ಶಾಲೆ ಸೂಳ್ಯೋಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆ ನಾವೂರು ಮಕ್ಕಳಿಂದ ಮತ್ತು ತೃಪ್ತಿ ಸಂಜೀವಿನಿ ಒಕ್ಕೂಟದ ಸದಸ್ಯರಿಂದ ನಡೆಯಿತು.

Exit mobile version