Site icon Suddi Belthangady

ಲಾಯಿಲ ವೆಂಕಟರಮಣ ದೇವಸ್ಥಾನದಲ್ಲಿ ಅಖಂಡ ಭಜನಾ ಸಪ್ತಾನು ಸಪ್ತಾಹ

ಲಾಯಿಲ : ಲಾಯಿಲ ವೆಂಕಟರಮಣ ದೇವಸ್ಥಾನದಲ್ಲಿ 45 ದಿನಗಳ ಕಾಲ ಕಾಶಿ ಕಾಶೀಮಠಾಧೀಶ ಶ್ರೀಮದ್ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ವಸಂತೋತ್ಸವ ಕಾರ್ಯಕ್ರಮಕ್ಕೆ ಭರದ ಸಿದ್ಧತೆ ನಡೆದಿದೆ. ಈಗಾಗಲೇ ದೇವಸ್ಥಾನಕ್ಕೆ ಆಗಮಿಸಿರುವ ಸ್ವಾಮೀಜಿಯವರಿಗೆ ಭವ್ಯ ಭಕ್ತಿಯ ಸ್ವಾಗತ ದೊರಕಿದೆ. ವಸಂತೋತ್ಸವದ ಜೊತೆಗೆ 49 ದಿನಗಳ ಕಾಲ ಅಖಂಡ ಭಜನಾ ಸಪ್ತಾನುಸಪ್ತಾಹ ಕೂಡ ನಡೆಯಲಿದ್ದು ಒಟ್ಟು 55 ದಿನಗಳ ವೈಭವದ ಕಾರ್ಯಕ್ರಮ ನಡೆಯಲಿದೆ.

ಮಾ. 22 ರಂದು ಕಾಶಿ ಕಾಶೀಮಠಾಧೀಶ ಶ್ರೀಮದ್ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಅಖಂಡ ಭಜನಾ ಸಪ್ತಾನು ಸಪ್ತಾಹಕ್ಕೆ ದೀಪ ಪ್ರಜ್ವಲನೆಯೊಂದಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಠದ ಹಾಗೂ ಶ್ರೀ ವೆಂಕಟರಮಣ ದೇವಸ್ಥಾನದ ವೈದಿಕ ವೃಂದ ಆಡಳಿತ ಮೊಕ್ತೇಸರರಾದ ಡಾ. ಸುಧೀಂದ್ರ ಪ್ರಭು, ಮೊಕ್ತೇಸರರು, ಎಂ ಎಲ್ ಸಿ ಪ್ರತಾಪ್ ಸಿಂಹ ನಾಯಕ್, ಆನುವಂಶಿಕ ಮೊಕ್ತೇಸರ ಸುನೀಲ್ ಶೆಣೈ, ಮಾಜಿ ಆಡಳಿತ ಮೊಕ್ತೇಸರ ವಿವೇಕಾನಂದ ಪ್ರಭು, ರಾಮದಾಸ್ ಪೈ ಗುರುವಾಯನಕೆರೆ ಶ್ರೀ ವರದ ಪಾಂಡುರಂಗ ವಿಠಲ ಮಂದಿರದ ಅಧ್ಯಕ್ಷ ಜಿ ಗೋಪಿನಾಥ್ ನಾಯಕ್ ಹಾಗೂ ವೇಣೂರು, ಪುಂಜಾಲಕಟ್ಟೆ ಉಜಿರೆಯ ನಾಗರಿಕ ಬಂಧುಗಳು ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿದ್ದರು.

ಪ್ರತೀ ದಿನ ಸಾಯಂಕಾಲ ವಿಶೇಷ ರೂಪದಲ್ಲಿ ದೇವರ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಗುತ್ತದೆ.

Exit mobile version