Site icon Suddi Belthangady

ಕರಾಯದಲ್ಲಿ ಓಮ್ನಿ-ಆಟೋರಿಕ್ಷಾ ಮುಖಾಮುಖಿ ಡಿಕ್ಕಿ: ಆಟೋ ಚಾಲಕ ಗಂಭೀರ

ಕರಾಯ: ಬೆಳ್ತಂಗಡಿ ತಾಲೂಕಿನ ಕರಾಯದ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪ ಓಮ್ನಿ ಕಾರು ಮತ್ತು ಆಟೋ ರಿಕ್ಷಾ ಮುಖಾಮುಖಿ ಡಿಕ್ಕಿಯಾಗಿದ್ದು, ಎರಡೂ ವಾಹನದಲ್ಲಿದ್ದವರು ಗಾಯಗೊಂಡಿದ್ದಾರೆ. ಇವರಲ್ಲಿ ಆಟೋ ಚಾಲಕ ಬಾರ್ಯ ಗ್ರಾಮದ ಮೂರುಗೋಳಿಯ ನವೀನ್ ತೀವ್ರ ಗಾಯಗೊಂಡಿದ್ದು, ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ಸುಳ್ಯ ಸಮೀಪದ ಸಂಪಾಜೆಯ ಶ್ರೀಪತಿ ಎಂಬವರು ತಮ್ಮ ಮಗಳನ್ನು ಉಜಿರೆಯ ಖಾಸಗಿ ಕಾಲೇಜಿನ ಪ್ರವೇಶಾತಿಗಾಗಿ ಓಮ್ನಿ ಕಾರಿನಲ್ಲಿ ಕರೆದುಕೊಂಡು ಬರುತ್ತಿದ್ದರು. ಕರಾಯ ತಿರುವಿನಲ್ಲಿ ನಡೆದ ಅಪಘಾತದಲ್ಲಿ ಓಮ್ನಿಯಲ್ಲಿದ್ದ ಶ್ರೀಪತಿಯವರ ಮಗಳು,ಮಡದಿಯೂ ಕೂಡ ಗಾಯಗೊಂಡಿದ್ದು,ಆಸ್ಪತ್ರೆಗೆ ದಾಖಲಿಸಲಾಗಿದೆ.

Exit mobile version