Site icon Suddi Belthangady

ಕೊಯ್ಯೂರು: ಅಂಗನವಾಡಿ ಕೇಂದ್ರಕ್ಕೆ ಜಾರು ಬಂಡಿ ಕೊಡುಗೆ

ಕೊಯ್ಯೂರು: ಇಲ್ಲಿಯ ಬಲ್ಯರೊಟ್ಟು ಎಂಬಲ್ಲಿನ ಮಿನಿ ಅಂಗನವಾಡಿ ಕೇಂದ್ರದಲ್ಲಿ ಕೊಡುಗೈದಾನಿ, ಪ್ರಗತಿಪರ ಕೃಷಿಕ ಪ್ರಚಂಡ ಭಾನು ಭಟ್ ಇವರ ಪುತ್ರ ವಿಷ್ಣು ಪ್ರಸಾದ್ ಪಾಂಬೇಲು ಇವರ ಮದುವೆಯ ದಿನದ ಸವಿನೆನಪಿಗಾಗಿ ಕೊಡುಗೆಯಾಗಿ ನೀಡಿದ ಜಾರು ಬಂಡಿಯ ಉದ್ಘಾಟನಾ ಕಾರ್ಯಕ್ರಮವನ್ನು ಬಲ್ಯರೊಟ್ಟು ಮಿನಿ ಅಂಗನವಾಡಿ ಕೇಂದ್ರದಲ್ಲಿ ಮಾ. 16 ರಂದು ನೆರವೇರಿಸಲಾಯ್ತು.

ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಿರಿಯ ಮೇಲ್ವಿಚಾರಕಿಯಾದ ಶ್ರೀಮತಿ ರತ್ನಾವತಿ, ಬಾಲವಿಕಾಸ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಗಿರಿಜಾ, ಗ್ರಾಮ ಪಂಚಾಯತ್ ಸದಸ್ಯ ಲೋಕೇಶ್ ಗೌಡ ಪಾಂಬೇಲು ಹಾಗೂ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ಮಹಮ್ಮದ್ ಹಾರೇನ್ ಮತ್ತು ಶ್ರೀಮತಿ ಶಶಿಕಲಾ ವಿ.ಎನ್. ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಗೀತಾ ಪಾಂಬೇಲು ನೆರವೇರಿಸಿ, ಅಂ. ಕಾರ್ಯಕರ್ತೆ ಶ್ರೀಮತಿ ಭವಾನಿ ಸ್ವಾಗತಿಸಿ ಧನ್ಯವಾದವಿತ್ತರು.

Exit mobile version