Site icon Suddi Belthangady

ಬೆಳ್ತಂಗಡಿ, ಧರ್ಮಸ್ಥಳ, ಉಜಿರೆಯಲ್ಲಿ ತುಂತುರು ಮಳೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಹಲವೆಡೆ ಮಾ.14ರ ತಡರಾತ್ರಿ ಮತ್ತು ಮಾರ್ಚ್ 15ರ ಮುಂಜಾನೆ ತುಂತುರು ಮಳೆಯಾಗಿದೆ.
ಉಜಿರೆ, ಧರ್ಮಸ್ಥಳ, ಬೆಳ್ತಂಗಡಿ, ಲಾಯಿಲಾ ಮುಂತಾದೆಡೆ ತುಂತುರು ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಮುಂಡಾಜೆಯಲ್ಲೂ ತುಂತುರು ಮಳೆಯಾಗಿದ್ದು,‌ಇನ್ನೆರಡು ದಿನಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ.

ಕೊಡಗಿನಂತೆ ನಮ್ಮೂರಿನಲ್ಲೂ ಅಬ್ಬರಿಸುತ್ತಾರಾ ವರುಣದೇವ?

ಬಿರು ಬಿಸಿಲಿನ ಬೇಗೆಯಿಂದ ತತ್ತರಿಸುತ್ತಿದ್ದ ಕೊಡಗಿನ ಜನತೆಗೆ ಮಾರ್ಚ್ 14ರಂದು ವರುಣದೇವ ತಂಪೆರೆದಿದ್ದಾನೆ. ದಕ್ಷಿಣ ಕನ್ನಡದಲ್ಲೂ ಅದೇ ನಿರೀಕ್ಷೆಯಿದೆ. ಹವಮಾನ ವರದಿಯ ಪ್ರಕಾರ ಇಂದು ಮತ್ತೆ ಮಳೆಯಾಗುವ ಸಾಧ್ಯತೆಯಿದ್ದು, ಜನರು ವರುಣದೇವನ ನಿರೀಕ್ಷೆಯಲ್ಲಿದ್ದಾರೆ.

Exit mobile version