Site icon Suddi Belthangady

ಲಾಯಿಲ ಸಾಜಿದಾರವರಿಗೆ ಪಿಹೆಚ್‌‌ಡಿ ಪದವಿ

ಲಾಯಿಲ: ಲಾಯಿಲ ಗ್ರಾಮದ ಕಕ್ಕೇನದ ಸಾಜಿದಾ ಇವರು ಪ್ರತಿಷ್ಠಿತ ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ಬಿ.ಉದಯ ಇವರ ಮಾರ್ಗದರ್ಶನದಲ್ಲಿ ‘ಕರಾವಳಿ ಕರ್ನಾಟಕದ ಮುಸ್ಲಿಂ ಬರಹಗಾರರ ಕಥನ ಸಾಹಿತ್ಯ – ಕಾದಂಬರಿಗಳಲ್ಲಿ ಸಮಾಜ ಮತ್ತು ಸಂಸ್ಕೃತಿ’ ಎಂಬ ವಿಷಯದ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಪಿಹೆಚ್.ಡಿ ಪದವಿಯನ್ನು ನೀಡಿ ಗೌರವಿಸಿದೆ.

ಇವರು ಕೆ.ಹೆಚ್.ಇಸುಬು ಮತ್ತು ಝುಬೈದರವರ ಪುತ್ರಿಯಾಗಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದಲ್ಲಿ ಪಿಹೆಚ್‌ಡಿ ಪದವಿಯನ್ನು ಪಡೆದ ಮುಸ್ಲಿಂ ಸಮುದಾಯದ ಮೊದಲ ಮಹಿಳಾ ಸಂಶೋಧನಾರ್ಥಿ ಎಂಬ ಹೆಗ್ಗಳಿಕೆಗೆ ಸಾಜಿದಾ ಪಾತ್ರರಾಗಿದ್ದಾರೆ.

Exit mobile version