Site icon Suddi Belthangady

ಮಾಯ ದೇವಸ್ಥಾನದ ಸಭಾ ಭವನಕ್ಕೆ ರೂ.25 ಲಕ್ಷ ಮಂಜೂರು: ಶಾಸಕ ಹರೀಶ್ ಪೂಂಜ

ಬೆಳಾಲು :ಮಾಯ ಶ್ರೀ ಮಹಾದೇವ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದ ಶಾಸಕ ಹರೀಶ್ ಪೂಂಜ ಭಕ್ತಿ ಗಾನ ಸುಧೆ ನಡೆಸಿಕೊಟ್ಟ ಪೆಲತ್ತಡಿ ಜನಾರ್ದನ ಮತ್ತು ಬಳಗದವರನ್ನು ಗೌರವಿಸಿ ಮಾತನಾಡಿ ಈ ದೇವಸ್ಥಾನಕ್ಕೆ ಸಭಾ ಭವನ ನಿರ್ಮಿಸಲು ಸರಕಾರದಿಂದ ರೂ.25 ಲಕ್ಷ ಮಂಜೂರುಗೊಂಡಿದೆ ಶೀಘ್ರದಲ್ಲಿ ಶಿಲಾನ್ಯಾಸ ಮಾಡಲಾಗುವುದು ಎಂದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಚ್. ಪದ್ಮ ಗೌಡ, ಬೆಳಾಲು ಶ್ರೀ ಧ. ಮಂ. ಪ್ರೌಢ ಶಾಲಾ ಮುಖ್ಯ ಶಿಕ್ಷಕ ರಾಮಕೃಷ್ಣ ಭಟ್, ಶಿಕ್ಷಕ ಧರ್ಮೇಂದ್ರ ಕುಮಾರ್, ಮಹೇಶ್ ಪುಳಿತ್ತಡಿ, ವ್ಯವಸ್ಥಾಪನಾ ಸಮಿತಿ ಸದಸ್ಯರು, ಭಜನಾ ಮಂಡಳಿ ಸದಸ್ಯರು ಹಾಜರಿದ್ದರು.

Exit mobile version