Site icon Suddi Belthangady

ಶೇಖರ್ ಲಾಯಿಲ ಅವರಿಗೆ ಪಿತೃವಿಯೋಗ

ಬೆಳ್ತಂಗಡಿ: ಸಿಪಿಐಎಂ ಪಕ್ಷದ ಹಿರಿಯ ಸದಸ್ಯ, ದಲಿತ ಹಕ್ಕುಗಳ ಹೋರಾಟ ಸಮಿತಿ ಸಹಿತ ಚಳವಳಿಗಳಲ್ಲಿ ತೊಡಗಿಸಿಕೊಂಡಿರುವ ಶೇಖರ್ ಲಾಯಿಲ ಅವರಿಗೆ ಪಿತೃವಿಯೋಗವಾಗಿದೆ.
ಶೇಖರ್ ಅವರ ತಂದೆ ಲಾಯಿಲ ಗ್ರಾಮದ ಲಾಯಿಲ ಬೈಲು ನಿವಾಸಿ ಇನಾಸ (80ವ) ಅವರು ಅಲ್ಪಕಾಲದ ಅಸೌಖ್ಯದಿಂದ ಮಾ.1 ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ.‌

ಕೃಷಿ ಕೂಲಿ ಕಾರ್ಮಿಕರಾಗಿದ್ದ ಅವರು ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದರು.
ಮೃತರು ಪತ್ನಿ ವೆಂಕಮ್ಮ, ಪುತ್ರರಾದ ಶೇಖರ್ ಲಾಯಿಲ, ಉತ್ಸಾಹಿ ಯುವಕ ಮಂಡಲದ‌ ಕಾರ್ಯದರ್ಶಿ ಎಲ್ ಹರೀಶ್ ಕುಮಾರ್, ಪುತ್ರಿ ಜಯಂತಿ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

Exit mobile version