Site icon Suddi Belthangady

ಗೇರುಕಟ್ಟೆ ಟ್ರಾನ್ಸ್ ಫಾರ್ಮ್ ನಲ್ಲಿ ತಂತಿಗಳ ಸ್ಪರ್ಶದಿಂದ ಬೆಂಕಿ

ಗೇರುಕಟ್ಟೆ : ಕಳಿಯ ಗ್ರಾಮದ ಹೃದಯ ಭಾಗದಲ್ಲಿ ವಿದ್ಯುತ್ ಪೂರೈಕೆ ಮಾಡುವ ಟಿ‌.ಸಿಯಲ್ಲಿ ತಂತಿಗಳು ಸ್ಪರ್ಶಿಸಿ ಪದೆ- ಪದೇ ಬೆಂಕಿ ಉಂಡೆಗಳು ಬಿದ್ದು ಕಂಬದ ಕೆಳಗೆ ಬೆಂಕಿ ಉರಿಯುವ ಘಟನೆ ಮಾ.1 ರಂದು ನಡೆಯಿತು.

ಬೆಳಿಗ್ಗೆ ಯಿಂದ ಸುಮಾರು 10 ಕ್ಕೂ ಹೆಚ್ಚಿನ ಸ್ಥಳದಲ್ಲಿ ಈ ರೀತಿಯ ಘಟನೆ ನಡೆಯುತ್ತಿದೆ ಎಂದು ಸ್ಥಳೀಯರು ದೂರಿಕೊಂಡರು. ಪಕ್ಕದಲ್ಲಿ ಅಂಗಡಿ, ಹೋಟೆಲ್ ಮತ್ತು ಸೇವಾಸಿಂಧು ಕಛೇರಿಗೆ ಬರುವವರಿಗೆ ತುಂಬಾ ತೊಂದರೆಯಾಗುತ್ತಿದೆ. ಸಂಬಂಧಿಸಿದ ಇಲಾಖೆಯ ಮೇಲಾಧಿಕಾರಿಗಳು ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದರು. ಕಳಿಯ ಪಂಚಾಯತ್ ವ್ಯಾಪ್ತಿಯಲ್ಲಿ ಈಗಾಗಲೇ ಇಂತಹ ಘಟನೆಗಳು ಸಂಭವಿಸಿ ಗುಡ್ಡೆ ಬೆಂಕಿ ತಗುಲಿದ ಘಟನೆ ನಡೆದಿದೆ. ಕೃಷಿಕರಿಗೆ ವಿದ್ಯಾರ್ಥಿಗಳಿಗೆ ಹಾಗೂ ಗೃಹ ಬಳಕೆಗೆ ವಿದ್ಯುತ್ (ಪವರ್ ಕಟ್) ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ ಎಂದು ವಿದ್ಯುತ್ ಬಳಕೆದಾರರು ಅಕ್ರೋಶ ವ್ಯಕ್ತಪಡಿಸಿದರು.

Exit mobile version