Site icon Suddi Belthangady

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ತೆರೆ ಮರೆಯ ಸಾಧಕರಿಗೆ ಗೌರವ

ಬೆಳ್ತಂಗಡಿ : ಜೆಸಿಐ ಬೆಳ್ತಂಗಡಿ ಮಂಜುಶ್ರೀ ತೆರೆ ಮರೆಯ ಸಾಧಕ ಸುಮಾರು 23 ವರ್ಷಗಳಿಂದ ಬೆಳ್ತಂಗಡಿ ಮೆಸ್ಕಾಂನಲ್ಲಿ ಪವರ್ ಮ್ಯಾನ್ ಆಗಿ ಸೇವೆ ಸಲ್ಲಿಸುತ್ತಿರುವ ರಾಜೇಶ್ ಕೆ.ಯವರಿಗೆ ಜೆಸಿ ಭವನದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ವಲಯ 15ರ ಪ್ರಾಂತ್ಯ ಸಿ ಉಪಾಧ್ಯಕ್ಷರಾದ ಜೆಸಿ ಭರತ್ ಶೆಟ್ಟಿ ಘಟಕದ ಪದಾಧಿಕಾರಿಗಳ ಜವಾಬ್ದಾರಿಗಳ ಬಗ್ಗೆ ತರಬೇತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷ ಜೆಸಿ ಶಂಕರ್ ರಾವ್ ವಹಿಸಿದ್ದರು.

ಘಟಕದ ಪೂರ್ವಧ್ಯಕ್ಷ, ವಲಯಾಧಿಕಾರಿ ಜೆಸಿ ಸ್ವರೂಪ್ ಶೇಖರ್ ವೇದಿಕೆಗೆ ಗೌರವಾನ್ವಿತರನ್ನು ಬರಮಾಡಿಕೊಂಡರು. ಜೆಸಿ ವಾಣಿ ಯನ್ನು ಮಹಿಳಾ ವಿಭಾಗದ ಸಂಯೋಜಕಿ ಜೆಸಿ ಮಮಿತ ಸುಧೀರ್ ನುಡಿದರು.
ಕಾರ್ಯಕ್ರಮ ಸಂಯೋಜಕ ಘಟಕದ ಉಪಾಧ್ಯಕ್ಷ ಜೆಸಿ ರಂಜಿತ್ ಹೆಚ್.ಡಿ, ವಲಯ ಉಪಾಧ್ಯಕ್ಷರ ಪರಿಚಯ ವಾಚಿಸಿದರು, ಎಂಪೌರಿಂಗ್ ಯೂಥ್ಸ್ ವಿಭಾಗದ ಸಂಯೋಜಕ ಜೆಸಿ ಸ್ಮಿತೇಶ್ ಎಸ್. ಬಾರ್ಯ ಸನ್ಮಾನಿತರ ಪರಿಚಯ ವಾಚಿಸಿದರು.

ಘಟಕದ ಪೂರ್ವಾಧ್ಯಕ್ಷ ಜೆಸಿ ಚಿದಾನಂದ ಇಡ್ಯಾ, ಜೆಸಿ ನಾರಾಯಣ ಶೆಟ್ಟಿ, ಜೆಸಿ ಕಿರಣ್ ಕುಮಾರ್ ಶೆಟ್ಟಿ ಮತ್ತು ಅಭಿನಂದನ್ ಹರೀಶ್ ಕುಮಾರ್, ಸದಸ್ಯರುಗಳಾದ ಜೆಸಿ ಚಂದ್ರಹಾಸ್ ಬಳಂಜ, ಜೆಸಿ ಸುಭಾಷಿಣಿ, ಜೆಸಿ ಶೈಲೇಶ್ ಮತ್ತು ಜೆಸಿ ರಜತ್ ಉಪಸ್ಥಿತರಿದ್ದರು.

ಘಟಕದ ಕಾರ್ಯದರ್ಶಿ ಜೆಸಿ ಸುಧೀರ್ ಕೆ. ಎನ್ ಸರ್ವರಿಗೂ ಧನ್ಯವಾದವಿತ್ತರು.

Exit mobile version