Site icon Suddi Belthangady

ಮಾಯ ದೇವಸ್ಥಾನದಲ್ಲಿ ಗೌಡರ ಸಂಘದ ವತಿಯಿಂದ ಶ್ರಮದಾನ

ಬೆಳಾಲು : ಶ್ರೀ ಮಾಯ ಮಹಾದೇವ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಬೆಳಾಲು ಗ್ರಾಮ ಸಮಿತಿ ವತಿಯಿಂದ ಫೆ.26 ರಂದು ದೇವಸ್ಥಾನದ ಸುತ್ತಮುತ್ತ ಸ್ವಚ್ಛಗೊಳಿಸುವ ಕೆಲಸ ಶ್ರಮದಾನದ ಮೂಲಕ ನಡೆಸಿದರು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾಗೂ ಗೌಡರ ಯಾನೆ ಒಕ್ಕಲಿಗರ ತಾಲೂಕು ಸಂಘದ ಗೌರವ ಅಧ್ಯಕ್ಷ ಎಚ್. ಪದ್ಮ ಗೌಡ, ಗ್ರಾಮ ಸಮಿತಿ ಅಧ್ಯಕ್ಷ ಎಸ್. ವಿಜಯ ಗೌಡ ಸೌತೆಗದ್ದೆ, ಕಾರ್ಯದರ್ಶಿ ಧರ್ಮೇಂದ್ರ ಕುಮಾರ್ ಪುಚ್ಚೆಹಿತ್ಲು ಮತ್ತು ಪದಾಧಿಕಾರಿಗಳು, ಯುವ ವೇದಿಕೆಯ ಗೌರವ ಅಧ್ಯಕ್ಷ ಮಹೇಶ್ ಪುಳಿತ್ತಡಿ, ಕಾರ್ಯದರ್ಶಿ ಸಂಜೀವ ಗೌಡ ಕಡಾಂಡ, ಮಹಿಳಾ ವೇದಿಕೆಯ ಅಧ್ಯಕ್ಷೆ ಕನ್ನಿಕಾ ಪದ್ಮ ಗೌಡ, ಕಾರ್ಯದರ್ಶಿ ಲತಾ ಕೇಶವ ಗೌಡ, ಕೋಶಾಧಿಕಾರಿ ಲೀಲಾ ವೀರಣ್ಣ ಗೌಡ, ತಾಲೂಕು ಸಮಿತಿ ನಿರ್ದೇಶಕಿ ಉಷಾ ವೆಂಕಟ್ರಮಣ ಗೌಡ, ಪದಾಧಿಕಾರಿಗಳು ಸದಸ್ಯರು, ಶೇಖರ ಗೌಡ ಕೊಲ್ಲಿಮಾರು, ಭಜನಾ ಮಂಡಳಿ ಅಧ್ಯಕ್ಷ ಕೃಷ್ಣಪ್ಪ ಗೌಡ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು, ಊರವರು ಭಾಗವಹಿಸಿದ್ದರು.

Exit mobile version