Site icon Suddi Belthangady

ಕನ್ಯಾಡಿಯಲ್ಲಿ ನೂತನ ಪ್ರಗತಿ ರೆಸಿಡೆನ್ಸಿ ಶುಭಾರಂಭ

ಧರ್ಮಸ್ಥಳ: ಕನ್ಯಾಡಿ || ರಾಮ ಮಂದಿರದ ಬಳಿ ರಾಧಿಕಾ ಬಿ. ಶೆಟ್ಟಿ ಮತ್ತು ಉದಯ ಧರ್ಮಸ್ಥಳ ಇವರು ನೂತನವಾಗಿ ನಿರ್ಮಿಸಿದ ವಸತಿ ಗೃಹ ಪ್ರಗತಿ ರೆಸಿಡೆನ್ಸಿ ಇದರ ಉದ್ಘಾಟನೆಯು ಫೆ.23 ರಂದು ನಡೆಯಿತು.


ಉದ್ಘಾಟನೆಯನ್ನು ಕನ್ಯಾಡಿ ಶ್ರೀರಾಮ ಕ್ಷೇತ್ರದ ಮಹಾಸಂಸ್ಥಾನದ ಮಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ನೆರವೇರಿಸಿದರು.

ವೇದಿಕೆಯಲ್ಲಿ ವಿ.ಹಿಂ.ಪ ಪುತ್ತೂರು ಜಿಲ್ಲಾ ಉಪಾಧ್ಯಕ್ಷ ಭಾಸ್ಕರ ಧರ್ಮಸ್ಥಳ , ಶಾಂಭವಿ ರೈ , ಧರ್ಮಸ್ಥಳ ಗ್ರಾ. ಪಂ. ಸದಸ್ಯ ಹರೀಶ ಸುವರ್ಣ, ಉಜಿರೆ ಬೆನಕ ಕನಸ್ಟ್ರ ಕ್ಷನ್ಸ್ ನ ಗಣೇಶ ಎಂ., ಉಜಿರೆ ಭಾರತ ಬ್ಯಾಂಕ್‌ನ ಪ್ರಬಂಧಕರಾದ ಶ್ಯಾಮ್ ಎನ್. ಪೂಜಾರಿ, ಭಾಸ್ಕರ ಶೆಟ್ಟಿ ಮಂಗಳೂರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸ್ವಾಮೀಜಿಯವರ ಪಾದುಕಾ ಪೂಜೆಯನ್ನು ಉದಯ್ ದಂಪತಿಗಳು ಹಾಗೂ ಕುಟುಂಬಸ್ಥರು ನೆರವೇರಿಸಿದರು.

ಸೌಮ್ಯ ಕೃಷ್ಣ ಪ್ರಾರ್ಥಿಸಿದರು. ಶಿವಾನಂದ ಶೆಟ್ಟಿ ಸ್ವಾಗತಿಸಿ, ವಂದಿಸಿದರು. ಸಂಸ್ಥೆಯ ಮಾಲಕರಾದ ಶ್ರೀಮತಿ ರಾಧಿಕಾ ಬಿ. ಶೆಟ್ಟಿ ಮತ್ತು ಉದಯ ಧರ್ಮಸ್ಥಳ ರವರು ಬಂದಂತಹ ಅತಿಥಿ ಗಣ್ಯರನ್ನು ಸತ್ಕರಿಸಿದರು.

Exit mobile version