Site icon Suddi Belthangady

ನಾಲ್ಕೂರು: ಬೋವಾಡಿ ದೈವಸ್ಥಾನದಲ್ಲಿ ವರ್ಷಾವಧಿ ಉತ್ಸವ, ಶಾಸಕ ಹರೀಶ್ ಪೂಂಜರವರಿಗೆ ಸನ್ಮಾನ

ನಾಲ್ಕೂರು: ವರ್ಷಂಪ್ರತಿ ತಾರ್ದಡ್ಡದಲ್ಲಿ ನಡೆಯುವ ದೊಂಪದ ಬಲಿ ಮತ್ತು ಶ್ರೀ ಕೊಡಮಣಿತ್ತಾಯ ದೈವಸ್ಥಾನ ಬೋವಾಡಿಯಲ್ಲಿ ಶ್ರೀ ಕೊಡಮಣಿತ್ತಾಯ ಹಾಗೂ ಕಲ್ಲುರ್ಟಿ, ಕಲ್ಕುಡ ದೈವಗಳ ನೇಮೋತ್ಸವವು ಫೆ,19, 20ರಂದು ನಡೆಯಿತು.

ಈ ಸಂದರ್ಭದಲ್ಲಿ ಬೋವಾಡಿ ಕ್ಷೇತ್ರಕ್ಕೆ ಆಗಮಿಸಿದ ಶಾಸಕ ಹರೀಶ್ ಪೂಂಜರವರನ್ನು ಬೆಂಗಳೂರು ಉದ್ಯಮಿ ಹರೀಶ್ ಶೆಟ್ಟಿ ಕರ್ಬಿಂತ್ತಿಲ್ ನಾಲ್ಕೂರು ಮತ್ತು ಇತರರು ಸನ್ಮಾನಿಸಿದರು.

ಉತ್ಸವದಲ್ಲಿ ಬೆಸ್ಟ್ ಪೌಂಢೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್, ಪ್ರಮುಖರಾದ ಹೆಚ್.ಧರ್ಣಪ್ಪ ಪೂಜಾರಿ, ತಿಮ್ಮಪ್ಪ ಪೂಜಾರಿ ತಾರಿಪಡ್ಪು, ರಾಮಣ್ಣ ಪೂಜಾರಿ ಹುಂಬೆಜೆ, ಪದ್ಮಪ್ಪ ಪೂಜಾರಿ ತಾರಿಪಡ್ಪು, ಸುರೇಶ್ ಶೆಟ್ಟಿ ಕುರೆಲ್ಯ, ವಿಶ್ವನಾಥ ಹೊಳ್ಳ, ದೇಜಪ್ಪ ಪೂಜಾರಿ, ಬೋವಾಡಿ ಕ್ಷೇತ್ರದ ಭಕ್ತರು,ಗುರಿಕಾರರು, ಮುಖ್ಯಸ್ಥರು,ಪ್ರಮುಖರು ಉಪಸ್ಥಿತರಿದ್ದರು.

Exit mobile version