Site icon Suddi Belthangady

ಗೇರುಕಟ್ಟೆ: ಪರಪ್ಪು ದರ್ಗಾ ಶರೀಫ್ ನ ಉರೂಸ್ ಉದ್ಘಾಟನೆ, ತಾಜುಲ್ ಉಲಮಾ ಅನುಸ್ಮರಣೆ

ಗೇರುಕಟ್ಟೆ: ಪರಪ್ಪು ವಲಿಯುಲ್ಲಾಹಿ ಫಕೀರ್ ಮುಹಿಯುದ್ದೀನ್ ದರ್ಗಾ ಶರೀಫ್ ನ ಉರೂಸ್ ಕಾರ್ಯಕ್ರಮದ ಉದ್ಘಾಟನೆ ಹಾಗೂ ತಾಜುಲ್ ಉಲಮಾ ಅನುಸ್ಮರಣೆ ಫೆ. 21ರಂದು ನಡೆಯಿತು.

ಸಂಜೆ ದ್ವಜಾರೋಹಣವನ್ನು ಆಡಳಿತ ಸಮಿತಿಯ ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ ನೆರವೇರಿಸಿದರು. ತಾಜುದ್ದೀನ್ ಸಖಾಫಿ ದುವಾ ಗೈದರು. ರವೂಫ್ ಹಾಜಿ, ಹನೀಫ್ ಬಿ.ಐ.,ಶುಕೂರು ಉಜಿರೆ, ಅಬ್ದುಲ್ ಕರೀಮ್, ಸಿದ್ದೀಕ್ ಅಝ್ ಹರಿ, ಯೂಸುಫ್.ಎಂ.ಕೆ,ಆಸಿಫ್ ಹಾಜಿ ಎಸ್.ಯು., ಅಬೂ ಸ್ವಾಲಿಹ್, ಹಾಮದ್ ಕುಂಞ ಕೊರಂಜ, ಹಾರಿಶ್.ಎನ್.ಎ., ಮಹಮ್ಮದ್ ಎನ್.ಎನ್, ನಝೀರ್ ಸುಣ್ಣಲಡ್ಡ, ಸಿದ್ದೀಕ್ ಜಿ.ಎಚ್.,ಕೆ.ಎಂ.ಫಯಾಜ್, ರಫೀಕ್ ಪರಪ್ಪು ಹಾಜರಿದ್ದರು.
ನಂತರ ದರ್ಗಾ ಝಿಯಾರತ್ ನೆರವೇರಿಸಲಾಯಿತು.

ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಸದರ್ ಅಬೂಬಕ್ಕರ್ ಸಿದ್ದೀಕ್ ಮುಈನಿ ಸ್ವಾಗತಿಸಿದರು. ತಾಜುದ್ದೀನ್ ಸಖಾಫಿ ಉದ್ಘಾಟಿಸಿದರು, ಫಝಲ್ ಜಮಾಲುಲೈಲಿ ತಂಞಳ್ ವಾದಿ ಇರ್ಫಾನ್ ದುವಾ ನೆರವೇರಿಸಿದರು. ಮುಹಮ್ಮದ್ ಆಲಿ ಸಖಾಫಿ ಸುರಿಬೈಲು ತಾಜುಲ್ ಉಲಮಾ ಅನುಸ್ಮರಣಾ ಪ್ರಭಾಷಣಗೈದರು. ಉರೂಸ್ ಸಮಿತಿಯ ಅಧ್ಯಕ್ಷರಾದ ಹಾಜಿ ಬಿ.ಕೆ.ರವೂಫ್ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಕುಂಞ ಅಬ್ದುಲ್ಲ ದಾರಿಮಿ, ಪಿ.ಎಸ್.ಮಹಮ್ಮದ್ ಮದನಿ,ಹಸೈನಾರ್ ಸಅದಿ, ಅಬೂಬಕ್ಕರ್ ಹಾಜಿ,ಸಂಶೀರ್ ಸಖಾಫಿ,ಇಕ್ಬಾಲ್ ಮರ್ಜೂಕಿ, ಶರೀಫ್ ಮುಸ್ಲಿಯಾರ್, ಹಬೀಬ್ ಸಖಾಫಿ, ಮನ್ಸೂರ್ ಝುಹುರಿ,ಪಿ.ಬಿ ಅಬ್ದುಲ್ ಖಾದರ್ ಹಾಜಿ, ಮಹಮ್ಮದ್ ಹಾಜಿ ಮಡವೂರು, ಅಝೀಝ್ ಮದನಿ ಉಪಸ್ಥಿತರಿದರು.

Exit mobile version