Site icon Suddi Belthangady

ತಾ| ಚಿತ್ಪಾವನ ಬ್ರಾಹ್ಮಣರ ಸಂಘದ ವತಿಯಿಂದ ವಿಜಯರಾಘವ ಪಡುವೆಟ್ನಾಯರಿಗೆ ಶ್ರದ್ಧಾಂಜಲಿ

ಉಜಿರೆ : ಇತ್ತೀಚೆಗೆ ಅಗಲಿದ, ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ವಿಜಯರಾಘವ ಪಡುವೆಟ್ನಾಯರಿಗೆ ಬೆಳ್ತಂಗಡಿ ತಾಲೂಕು ಚಿತ್ಪಾವನ ಬ್ರಾಹ್ಮಣರ ಸಂಘದ ವತಿಯಿಂದ ಶ್ರದ್ಧಾಂಜಲಿ ಸಭೆ ಫೆ.21ರಂದು ಉಜಿರೆಯ ರಾಮಕೃಷ್ಣ ಸಭಾಭವನದಲ್ಲಿ ಜರಗಿತು.


ಅಧ್ಯಕ್ಷ ತ್ರಿವಿಕ್ರಮ ಹೆಬ್ಬಾರ್, ಕಾರ್ಯದರ್ಶಿ ನಾರಾಯಣ ಫಡಕೆ, ಪಡುವೆಟ್ನಾಯರ ಕುರಿತು ಮಾತನಾಡಿದರು.
ತಾಲೂಕಿನ ಚಿತ್ಪಾವನ ವಿಭಾಗಗಳ ಪದಾಧಿಕಾರಿಗಳಾದ ಅಶ್ವಿನಿ ಎ.ಹೆಬ್ಬಾರ್, ಯೋಗೀಶ್ ಭಿಡೆ, ಶಶಿಧರ್ ಠೋಸರ್, ಗಣೇಶ್ ಶೆಂಡ್ಯೆ, ಶಂಕರ್ ಆರ್.ಪಟವರ್ಧನ್ ಮತ್ತಿತರರು ಉಪಸ್ಥಿತರಿದ್ದರು.

Exit mobile version