Site icon Suddi Belthangady

ಉಜಿರೆ ಜನಾರ್ಧನ ದೇವಸ್ಥಾನ ಆಡಳಿತ ಮೊಕ್ತೇಸರ ಯು. ವಿಜಯ ರಾಘವ ಪಡುವೆಟ್ನಾಯ ನಿಧನ

ಉಜಿರೆ : ಉಜಿರೆ ಶ್ರೀ ಜನಾರ್ಧನ ದೇವಸ್ಥಾನದ ಆನುವಂಶಿಕ ಮೊಕ್ತೇಸರರು ಹಿರಿಯರೂ ಆಗಿದ್ದ ಯು.ವಿಜಯ ರಾಘವ ಪಡುವೆಟ್ನಾಯರು ಫೆ.19 ರಂದು ನಿಧನರಾದರು.

ಮೃತರು ಹಲವಾರು ದೇವಸ್ಥಾನ, ಸಂಘ ಸಂಸ್ಥೆಗಳ ಮಾರ್ಗದರ್ಶಕರರಾಗಿ, ಸಮಾಜ ಸೇವಕರಾಗಿದ್ದರು.

ಅವರು ಪುತ್ರರಾದ ತುಳು ಶಿವಳ್ಳಿ ಸಭಾ ಉಜಿರೆ ವಲಯಾಧ್ಯಕ್ಷ, ಹಲವು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿರುವ ಶರತ್ ಕೃಷ್ಣ ಪಡುವೆಟ್ನಾಯ, ಪುತ್ರಿ ಬೆಂಗಳೂರಿನಲ್ಲಿ ನೆಲೆಸಿರುವ ಸಂಧ್ಯಾ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

ಮೃತರ ಅಂತಿಮ ವಿಧಿವಿಧಾನ (ಫೇ.19)ಇಂದು ಸಂಜೆ 6:30ಕ್ಕೆ ನಡೆಯಲಿದೆ.

Exit mobile version