Site icon Suddi Belthangady

ಕೆ ಎಸ್ ಎಂ ಸಿ ಎ ಸಂಘಟನೆ ಯಿಂದ ಮನೆ ದುರಸ್ತಿ

ಬೆಳ್ತಂಗಡಿ :ಕರ್ನಾಟಕ ಸೀರೋಮಲಬಾರ್ ಕ್ಯಾಥೋಲಿಕ್ ಅಸೊಸಿಯೇಷನ್ ಇದರ ಉದನೆ ವಲಯದ ಸಹಕಾರದಲ್ಲಿ ಶಿರಾಡಿ ಗ್ರಾಮದ ಶರ್ವತ್ತಡ್ಕ ಪ್ರದೇಶದಲ್ಲಿ ಕಳೆದ ಮಳೆಗಾಲದಲ್ಲಿ ಗಾಳಿ ಮಳೆಗೆ ತೀವ್ರ ವಾಗಿ ಹಾನಿಗೊಳಗಾದ ಮನೆಯನ್ನು ಸುಮಾರು ರೂಪಾಯಿ ಐವತ್ತು ಸಾವಿರ ವೆಚ್ಚದಲ್ಲಿ ದುರಸ್ತಿ ಮಾಡಿ ಕುಟುಂಬಕ್ಕೆ ಹಸ್ತಾಂತರ ಮಾಡಲಾಯಿತು.

ಕೆ ಎಸ್ ಎಂ ಸಿ ಎ ಪ್ರಾಂತಿಯ ನಿರ್ದೇಶಕರಾದ ಶಾಜಿ ಮಾತ್ಯು ಈ ಒಂದು ಪ್ರಯತ್ನ ವನ್ನು ಅಭಿನಂದಿಸಿ ಅಗತ್ಯ ಕ್ಕೆ ತಕ್ಕಂತೆ ಸ್ಪಂದಿಸುವ ಮೂಲಕ ಸಂಘಟನೆ ಬೆಳೆಸಬಹುದೆಂದು ತಿಳಿಸಿದರು.
ವಲಯ ನಿರ್ದೇಶಕರಾದ ವಂದನಿಯ ಫಾ. ತೋಮಸ್ ಉದನೆ ವಂದನಿಯ ಫಾ.ಸನಿಷ್ ಶಿರಾಡಿ, ವಲಯ ಅಧ್ಯಕ್ಷ ರಾದ ಸೆಬಾಸ್ಟಿನ್ ಎನ್ ಎಂ., ಜೈಸನ್, ತೋಮಸ್ ಶೈನಿ , ಬಾಬು, ಮನೋಜ್ ಬಿಜು, ಫೆಲಿಕ್ಸ್, ಶಿರಾಡಿ ಯಿಂದ ಅಡ್ಡ ಹೊಳೆ ಯಿಂದ ಅಭಿಲಾಶ್ ಸಂತೋಷ್, ರೇಖಾ ಜೋಯ್, ಉದನೆಯಿಂದ ಜೋಯ್ ಜಯೇಶ್ ಮತ್ತು ಶಿಬು ನೆಲ್ಯಾಡಿ ಯಿಂದ ಸಹಕರಿಸಿದರು.

Exit mobile version