Site icon Suddi Belthangady

ಕೊಯ್ಯೂರು ಹಿ. ಪ್ರಾ. ಶಾಲೆಯಲ್ಲಿ ಅಮೃತ ಮಹೋತ್ಸವ ಅಂಗವಾಗಿ ಮಕ್ಕಳ ವ್ಯಾಪಾರ ಮೇಳ

ಕೊಯ್ಯೂರು : ಇಲ್ಲಿಯ ಆದೂರ್ ಪೇರಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಅಮೃತ ಮಹೋತ್ಸವದ ಅಂಗವಾಗಿ 3 ನೇ ಕಾರ್ಯಕ್ರಮವಾಗಿ ಫೆ.17 ರಂದು ಶಾಲಾ ಆವರಣದಲ್ಲಿ ಮಕ್ಕಳ ವ್ಯಾಪಾರ ಉತ್ಸವ ನಡೆಯಿತು.

ಕಾರ್ಯಕ್ರಮವನ್ನು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಿನಯ ಕೆ. ಉದ್ಘಾಟಿಸಿದರು. ಕೊಯ್ಯೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸುಮಿತಾ, ಸದಸ್ಯೆ ಹೇಮಾವತಿ ಕಡಮ್ಮಾಜೆ, ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಲೋಕೇಶ್ ಗೌಡ ಪಾಂಬೆಲು, ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ಚಂದ್ರಶೇಖರ್ ಸಾಲಿಯಾನ್, ಶಾಲಾ ಮುಖ್ಯ ಶಿಕ್ಷಕ ಬಳಿರಾಮ ಲಮಾಣಿ, ವಿದ್ಯಾರ್ಥಿ ನಾಯಕ ಸಾತ್ವಿಕ್, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಶಿಕ್ಷಕ ವೃಂದ, ಹೆತ್ತವರು, ಭಾಗವಹಿಸಿದ್ದರು. ಮಕ್ಕಳು ವಿವಿಧ ವ್ಯಾಪಾರ ನಡೆಸಿ ವ್ಯವಹಾರ ಜ್ಞಾನ ತಿಳಿದುಕೊಂಡರು.

Exit mobile version