Site icon Suddi Belthangady

ಗಡಾಯಿಕಲ್ಲು ಏರಿದ ಕೋತಿರಾಜ್ ಯಾನೆ ಜ್ಯೋತಿರಾಜ್

ನಡ : ತಾಲೂಕಿನ ಐತಿಹಾಸ ಕೋಟೆ ಗಡಾಯಿಕಲ್ಲನ್ನು (ನರಸಿಂಹ ಗಡ) ಚಿತ್ರದುರ್ಗದ ಜ್ಯೋತಿರಾಜ್ ಯಾನೆ ಕೋತಿರಾಜ್ ಫೆ.12 ರಂದು ಚಂದ್ಕೂರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ದೇವಸ್ಥಾನದ ಮುಂಭಾಗದಿಂದ ಎರಡು ಕಿ.ಮೀ ನಡೆದುಕೊಂಡು ಹೋಗಿ ಗಡಾಯಿಕಲ್ಲು ಬುಡದಲ್ಲಿ ತೆಂಗಿನಕಾಯಿ ಹೊಡೆದು ಏರಲು ನರಸಿಂಹಗಢ ಹತ್ತಲು ಪ್ರಾರಂಭಿಸಿದರು.

ವನ್ಯಜೀವಿ ಅರಣ್ಯ ವಿಭಾಗದಿಂದ ಅನುಮತಿ ಪಡೆದು ಉತ್ತರಾಭಿಮುಖವಾಗಿ ಕೈಗಳ ಸಹಾಯದಿಂದ ಗಡಾಯಿಕಲ್ಲು ಏರಲು ಆರಂಭಿಸಿದ್ದು ಸುರಕ್ಷತೆಯ ದೃಷ್ಟಿಯಿಂದ ಸೊಂಟಕ್ಕೆ ರೋಪ್ ಅಳವಡಿಸಿಕೊಂಡಿದ್ದಾರೆ. ಇವರೊಂದಿಗೆ ಚಿತ್ರದುರ್ಗದ ಇತರ 8 ಮಂದಿಯ ತಂಡ ಭಾಗವಹಿಸಿದ್ದರು.

ಸ್ಥಳೀಯ ಪಂಚಾಯತ್ ಜನಪ್ರತಿನಿಧಿಗಳು, ಅರಣ್ಯ ಅಧಿಕಾರಿ ಕಿರಣ್ ಪಾಟೀಲ್, ಸಾರ್ವಜನಿಕರು ಉಪಸ್ಥಿತರಿದ್ದು ಶುಭ ಹಾರೈಸಿದರು.

Exit mobile version