Site icon Suddi Belthangady

ಪದ್ಮುಂಜ ಎಸ್ ವೈ ಎಸ್ ಪದಾಧಿಕಾರಿಗಳ ಆಯ್ಕೆ

ಪದ್ಮುಂಜ ಇಲ್ಲಿಯ ಖಲಂದರ್ ಷಾ ಜುಮ್ಮಾ ಮಸೀದಿಯಲ್ಲಿ ಸುನ್ನೀ ಯುವಜನ ಸಂಘ( ಎಸ್ ವೈ ಎಸ್)ಸಮಿತಿಯ ಮಹಾಸಭೆಯು ಸಮಿತಿಯ ಅಧ್ಯಕ್ಷರಾದ ಅಬೂಬಕ್ಕರ್ ಪದ್ಮುಂಜ ರವರ ಅಧ್ಯಕ್ಷತೆಯಲ್ಲಿ ಜರುಗಿತು. ಚುನಾವಣಾಧಿಕಾಯಾಗಿ ಸೆಂಟರ್ ಸೋಷಿಯಲ್ ಕಾರ್ಯದರ್ಶಿ ಅಬ್ದುಲ್ ರಝಾಖ್ ಸಖಾಫಿ ಯವರು ಆಗಮಿಸಿ ನೂತನ ಸಮಿತಿ ರಚಿಸಿದರು.

ಅಧ್ಯಕ್ಷರಾಗಿ ಉಮ್ಮರ್ ಫಾರೂಖ್ ಸ ಅದಿ ಪದ್ಮುಂಜ, ಕಾರ್ಯದರ್ಶಿ ಯಾಗಿ ಅಶ್ರಫ್ ಪದ್ಮುಂಜ, ಕೋಶಾಧಿಕಾರಿಯಾಗಿ ಅಬ್ದುಲ್ ನಝೀರ್ ಮಲೆಂಗಲ್ಲು, ಸಾಂತ್ವನ ಕಾರ್ಯದರ್ಶಿ ಯಾಗಿ ಮುಹಮ್ಮದ್ ಖಲಂದರ್ ಪದ್ಮುಂಜ, ದ ಅವಾ ಕಾರ್ಯದರ್ಶಿಯಾಗಿ ಅಬ್ದುಲ್ ರಾಶಿದ್ ಸ ಅದಿ ಪದ್ಮುಂಜ ಇವರನ್ನು ಪದಾಧಿಕಾರಿಗಳಾಗಿ ಹಾಗೂ 15 ಜನರನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು.

ಸೆಂಟರ್ ಅಧ್ಯಕ್ಷ ಹೈದರ್ ಫೈಝಿ ಉಸ್ತಾದ್, ಸಂಘಟನಾ ಕಾರ್ಯದರ್ಶಿ ಅಬ್ಬಾಸ್ ಬಟ್ಲಡ್ಕ ಉಪಸ್ತಿತರಿದ್ದರು. ಖತೀಬ್ ಉಸ್ತಾದ್ ಹನೀಫ್ ಬಾ ಅಹ್ಸನಿಯವರು ಕಾರ್ಯಕ್ರಮ ಉದ್ಘಾಟಿಸಿದರು. ಎಸ್ ವೈ ಎಸ್ ರಾಜ್ಯ ಸಮಿತಿ ಕಾರ್ಯದರ್ಶಿ ಕಾಸಿಂ ಪದ್ಮುಂಜ ರವರು ಸ್ವಾಗತಿಸಿ ಧನ್ಯವಾದವಿತ್ತರು.

Exit mobile version