Site icon Suddi Belthangady

ಕಲ್ಪತರು ಸ್ಕೂಲ್ ಆಫ್ ನರ್ಸಿಂಗ್ ಪ್ರಮಾಣ ವಚನ ಸ್ವೀಕಾರ ಸಮಾರಂಭ

ಬೆಳ್ತಂಗಡಿ : ಇಲ್ಲಿಯ ಹಳೇಕೋಟೆ ಬಳಿ 2004ರಲ್ಲಿ ಪ್ರಾರಂಭಗೊಂಡು ಕಾರ್ಯಾಚರಿಸುವ ಕಲ್ಪತರು ಸ್ಕೂಲ್ ಆಫ್ ನರ್ಸಿಂಗ್ ವಿದ್ಯಾರ್ಥಿಗಳ 2022-23ನೇ ಸಾಲಿನ 19ನೇ ತಂಡದ ದೀಪ ಪ್ರಜ್ವಲನೆ ಮತ್ತು ಪ್ರಮಾಣ ವಚನ ಸ್ವೀಕಾರ, ಸಮಾರಂಭದ ಉದ್ಘಾಟನೆ ಫೆ.8ರಂದು ಬೆಳ್ತಂಗಡಿ ಸಿ ವಿ ಸಿ ಸಭಾಂಗಣದಲ್ಲಿ ಜರಗಿತು.

ಸಮಾರಂಭವನ್ನು ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮಧ್ಯಕ್ಷರಾದ ಬಿಷಪ್ ಲ್ವಾರೆನ್ಸ್ ಮುಕ್ಕುಹಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಸರಕಾರಿ ಆಸ್ಪತ್ರೆಯ ಗೈನಾಲಜಿಸ್ಟ್ ಡಾ| ರಶ್ಮಿ , ಬೆಳ್ತಂಗಡಿ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಶ್ರೀಮತಿ ಪ್ರಿಯಾ ಆಗ್ನೆಸ್ ಚಾಕೋ, ಜ್ಯೋತಿ ಅಸ್ಪತ್ರೆಯ ಡಾ| ಅನೂಜ ಎಸ್ ಡಿ., ವಕೀಲರಾದ ಸೇವಿಯರ್ ಪಾಲೇಲಿ, ಫಾ| ಜೋಸ್ ವಲಿಯ ಪರಂಬಿಲ್, ಪ್ರಿನ್ಸಿಪಾಲ್ ಚಂದ್ರಿಕ, ಉಪ ಪ್ರಾಂಶುಪಾಲೆ ಶ್ರೀಮತಿ ಜೆನ್ನಿ ಉಪಸ್ಥಿತರದ್ದರು.

ಉಪಪ್ರಾಂಶುಪಾಲರಾದ ಶ್ರೀಮತಿ ಜೆನ್ನಿ ಸ್ವಾಗತಿಸಿ, ಶಿವಾನಿ ಮತ್ತು ಡೈನ ಕಾರ್ಯಕ್ರಮ ನಿರೂಪಿಸಿದರು, ಪ್ರಿನ್ಸಿಪಾಲ್ ಶ್ರೀಮತಿ ಚಂದ್ರಿಕಾ ವರದಿ ಮಂಡಿಸಿದರು.

Exit mobile version