Site icon Suddi Belthangady

ಬೆಳ್ತಂಗಡಿ: ಅಮೂಲ್ಯ ರಬ್ಬರ್ ಇಂಡಸ್ಟ್ರೀಸ್ ಶುಭಾರಂಭ

ಬೆಳ್ತಂಗಡಿ: ಮೂಲತ ಬೆಳ್ತಂಗಡಿ ತಾಲೂಕಿನ ಮುಂಡೂರಿನವರಾದ ದಿವಾಕರ ಕುಲಾಲ್ ರವರು ಬೆಂಗಳೂರಿನಲ್ಲಿ ನೆಲೆಸಿ ಉದ್ಯಮವನ್ನು ನಡೆಸುತ್ತಿದ್ದು ನೂತನ ಅಮೂಲ್ಯ ರಬ್ಬರ್ ಇಂಡಸ್ಟ್ರೀಸ್ ಸಂಸ್ಥೆಯನ್ನು ನಿರ್ಮಿಸಿ ಇದರ ಉದ್ಘಾಟನೆಯು ಇತ್ತೀಚೆಗೆ ನಡೆಯಿತು.

ಈ ಸಂದರ್ಭದಲ್ಲಿ ದಿವಾಕರ ಕುಲಾಲ್ ಅವರ ಮಾತ ಪಿತರಾದ ಅಪ್ಪಿ ಮತ್ತು ಬಾಬು ಮೂಲ್ಯ ದಂಪತಿಯ 60ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮಾಚರಣೆ ಪ್ರಯುಕ್ತ ಕಳೆಂಜ ನಂದಗೋಕುಲ ಗೋಶಾಲೆಗೆ ರೂ 10 ಸಾವಿರ ದೇಣಿಗೆ ನೀಡಿದರು.

ಈ ಸಂದರ್ಭದಲ್ಲಿ ಶ್ರೀ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ನ ಸ್ಥಾಪಕಾಧ್ಯಕ್ಷರಾದ ಡಾ.ಎಂ.ಎಂ.ದಯಾಕರ್‌ ಅವರಿಗೆ ಅಮೂಲ್ಯ ಸೇವಾ ಪ್ರತಿಷ್ಟಾನದ ಅಧ್ಯಕ್ಷ ದಿವಾಕರ ಕುಲಾಲ್ ಅಮೂಲ್ಯ ರಬ್ಬರ್ ಇಂಡಸ್ಟ್ರೀಸ್‌ನ ಸಿಬ್ಬಂದಿ ವರ್ಗದವರ ಹುಟ್ಟುಹಬ್ಬ ಆಚರಣೆಯನ್ನು ಕಳೆಂಜದಲ್ಲಿರುವ ನಂದಗೋಕುಲ ಗೋಶಾಲೆಯೊಂದಿಗೆ ಆಚರಿಸಲು ನಿರ್ಧಾರ ಮಾಡಿ ಪ್ರತೀ ಸಿಬ್ಬಂದಿಯು ತನ್ನ ಹುಟ್ಟುಹಬ್ಬದಂದು ರೂ 500 ಗೋಶಾಲೆಗೆ ನೀಡುವುದು ಹಾಗೂ ಸಂಸ್ಥೆಯಿಂದ ರೂ. 500 ಸೇರಿಸಿ ನೀಡುವುದಾಗಿ ಭರವಸೆ ನೀಡಿದರು.

ಎಲ್ಲಾ ಸಿಬ್ಬಂದಿಗಳ ಹೆಸರು, ಮೊಬೈಲ್ ನಂಬರ್ ಮತ್ತು ಹುಟ್ಟಿದ ದಿನಾಂಕದ ಪಟ್ಟಿಯನ್ನು ನಂದಗೋಕುಲದ ಅಧ್ಯಕ್ಷರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ದಿವಾಕರ ಕುಲಾಲ್ ಮತ್ತು ಕುಟುಂಬಿಕರು ಅತಿಥಿ ಗಣ್ಯರನ್ನು ಸ್ವಾಗತಿಸಿ ಸತ್ಕರಿಸಿದರು.

Exit mobile version