Site icon Suddi Belthangady

ಚಾರ್ಮಾಡಿ ಪರಿಸರದಲ್ಲಿ ಕಾಡಾನೆ ದಾಳಿ; ಕೃಷಿಕರಲ್ಲಿ ಭೀತಿ

ಚಾರ್ಮಾಡಿ: ಚಾರ್ಮಾಡಿಯ ಮೃತ್ಯುಂಜಯ ನದಿ ಪರಿಸರದಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ಹಗಲು ಹೊತ್ತಿನಲ್ಲಿ ಒಂಟಿಸಲಗ ಸಂಚಾರ ನಡೆಸಿದೆ. ನದಿ ಮೂಲಕ ಸಮೀಪದ ಅರಣ್ಯಕ್ಕೆ ಹೋಗುತ್ತಿರುವ ದೃಶ್ಯವನ್ನು ಸ್ಥಳೀಯರು ಚಿತ್ರೀಕರಿಸಿದ್ದು ಈಗ ಸಾಮಾಜಿಕ ಜಾಲತಾಣ ಗಳಲ್ಲಿ ಹರಿದಾಡುತ್ತಿದೆ. ಅರಣ್ಯ ಇಲಾಖೆ ಈ ಬಗ್ಗೆ ಪರಿಶೀಲನೆ ನಡೆಸಿದೆ.


ಕಳೆದ ಒಂದು ತಿಂಗಳಿಂದ ಚಾರ್ಮಾಡಿ ಪರಿಸರದಲ್ಲಿ ಕಾಡಾನೆ ಕಾಟ ಇಲ್ಲದೆ ನಿರಾಳರಾಗಿದ್ದ ಕೃಷಿಕರಲ್ಲಿ ಮತ್ತೆ ಭೀತಿ ಆವರಿಸಿದೆ.

Exit mobile version