Site icon Suddi Belthangady

ಶ್ರೀ ಕ್ಷೇತ್ರ ದೇಲಂಪುರಿ: ಭಜನಾ ಮಂಡಳಿಯ ಪುನರ್ ರಚನೆ

ವೇಣೂರು: ಶ್ರೀ ಕ್ಷೇತ್ರ ದೇಲಂಪುರಿ ಶ್ರೀ ಮಹಾದೇವ ಮಹಾಗಣಪತಿ ದೇವಸ್ಥಾನದ ಭಜನಾ ಮಂಡಳಿಯ ಪುನರ್ ರಚನೆ ನಡೆಯಿತು.
ನೂತನ ಅಧ್ಯಕ್ಷರಾಗಿ ಜಗದೀಶ್ ನಾಯಕ್ ಮೂಂಕಾಡಿ ಆಯ್ಕೆಯಾದರು. ಕಾರ್ಯದರ್ಶಿಗಳಾಗಿ ಹರೀಶ್ ದೇವಾಡಿಗ ಕೈರೋಳಿ, ಪ್ರಶಾಂತ್ ನಾಯ್ಕ ದೇಲಂಪುರಿ, ಉಪಾಧ್ಯಕ್ಷರುಗಳಾಗಿ ಬಾಲಕೃಷ್ಣ ಭಟ್ ದಡ್ಡು, ಕೋಶಾಧಿಕಾರಿ ಮಹೇಶ್ ಭಟ್ ಮಿಯಂದೂರು, ಸಂಚಾಲಕರಾಗಿ ಗಿರಿಜಾ ಭಟ್ ದೇಲಂಪುರಿ ಸಂಘಟನ ಕಾರ್ಯದರ್ಶಿಯಾಗಿ ರತ್ನಾಕರ ಹೆಗ್ಡೆ ಮಜಲಡ್ಡ ಆಯ್ಕೆಯಾದರು. ಹಾಗೂ ಸುಮಾರು 17 ಮಂದಿಯನ್ನು ಸದಸ್ಯರನ್ನು ಆಯ್ಕೆ ಮಾಡಲಾಯಿತು. ಈ ಹಿಂದೆ ಭಜನ ಮಂಡಳಿಯನ್ನು ಸುಮಾರು 6 ವರ್ಷಗಳ ಕಾಲ ಮುನ್ನಡೆಸಿದ ಗಿರಿಜಾ ಭಟ್ ದೇಲಂಪುರಿ ಅವರನ್ನು ಅಭಿನಂದಿಸಲಾಯಿತು.

Exit mobile version