Site icon Suddi Belthangady

ಬೆಳ್ತಂಗಡಿ: ತುರ್ಕಳಿಕೆ ದರ್ಗಾ ಶರೀಫ್ ನ ಉರೂಸ್ ಕಾರ್ಯಕ್ರಮದಲ್ಲಿ ಸೌಹಾರ್ದ ಸಮಾರಂಭ

ಬೆಳ್ತಂಗಡಿ ತಾಲೂಕಿನ ಧಾರ್ಮಿಕ ಕ್ಷೇತ್ರಗಳಲ್ಲೊಂದಾದ ತುರ್ಕಳಿಕೆ ಹಯಾತುಲ್ ಅವುಲಿಯಾ ದರ್ಗಾ ಶರೀಪ್ ನಲ್ಲಿ ವರ್ಷಂಪ್ರತಿ ಜರಗುವ ಉರೂಸ್ ಕಾರ್ಯಕ್ರಮದ ನಿಮಿತ್ತ ಸರ್ವ ಧರ್ಮ ಸೌಹಾರ್ದ ಸಮಾರಂಭವು ಫೆ.05 ರಂದು ರಾತ್ರಿ ಮರ್ಹೂಮ್ ಪಿ.ಎಸ್.ಉಸ್ತಾದ್ ವೇದಿಕೆಯಲ್ಲಿ ನಡೆಯಿತು.
ಖತೀಬರಾದ ಅಬ್ದುಲ್ ಹಮೀದ್ ಸಖಾಫಿ ಉದ್ಘಾಟಿಸಿದರು. ಕಲ್ಲೇರಿ ತಂಞಳ್ ದುವಾ ನೆರವೇರಿಸಿದರು. ಮುಖ್ಯ ಪ್ರಭಾಷಣವನ್ನು ಸಿರಾಜುದ್ದೀನ್ ಸಖಾಫಿ ಕನ್ಯಾನ ನಡೆಸಿದರು. ಹಂಝ ತಂಞಳ್ ದುವಾ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ರಮಾನಾಥ ರೈ, ಗಂಗಾಧರ ಗೌಡ, ಮಾಜಿ ಶಾಸಕರಾದ ವಸಂತ ಬಂಗೇರ, ಶಾಹುಲ್ ಹಮೀದ್ ಕೆ.ಕೆ., ರಕ್ಷಿತ್ ಶಿವರಾಮ್, ಲುಕ್ಮಾನ್, ಜಯವಿಕ್ರಮ್ ಮಾತನಾಡಿದರು, ವೇದಿಕೆಯಲ್ಲಿ ಅಯ್ಯೂಬ್ ಡಿ.ಕೆ., ನವೀನ್ ರೈ, ಕೆ.ಎಮ್. ಅಬ್ದುಲ್ ಕರೀಮ್ ಗೇರುಕಟ್ಟೆ, ನವೀನ್ ಪ್ರಸಾದ್ ಗೌಡ, ನವೀನ್ ಕುಮಾರ್, ತಾಜುದ್ದೀನ್,ಕಾಸಿಂ ಪದ್ಮುಂಜ ,ಕುಶಾಲಪ್ಪ ಗೌಡ ಇಜಿಮಾನ್, ಯೋಗಿಶ್ ಅಳಕ್ಕೆ, ಜೋನ್ ಲೋಬೋ, ರಹಿಮಾನ್ ಅಳಕ್ಕೆ, ಹಕೀಮ್, ನಝೀರ್ ಬಿಕ್ರಿಮಾರ್, ಸುಲೈಮಾನ್ ಕೊಂಬಟ್ಟಿ ಮಾರ್, ಸುಲೈಮಾನ್ ಬಿಕ್ರಿಮಾರ್, ಅಬ್ಬಾಸ್ ಕೊಲ್ಯ, ಮಹಮ್ಮದಾಲಿ ಸಮಿತಿ ಅಧ್ಯಕ್ಷರಾದ ಸಿದ್ದೀಕ್ , ಕಾರ್ಯದರ್ಶಿ ಹನೀಫ್ ಹಾಜರಿದ್ದರು. ಮುಹಮ್ಮದ್ ಅಲಿ ತುರ್ಕಳಿಕೆ ಸ್ವಾಗತಿಸಿ, ರಶೀದ್ ಮಡಂತ್ಯಾರು ಕಾರ್ಯಕ್ರಮ ನಿರೂಪಿಸಿದರು.

Exit mobile version