Site icon Suddi Belthangady

ಲಾಯಿಲ: ರಾಘವೇಂದ್ರ ಮಠದಲ್ಲಿ ಸಾರ್ವಜನಿಕ ಶನೀಶ್ವರ ಪೂಜೆ ಮತ್ತು ಯಕ್ಷಗಾನ ಬಯಲಾಟ

ಲಾಯಿಲ: ಶ್ರೀ ಗುರು ರಾಘವೇಂದ್ರ ಸ್ವಾಮಿ ಸೇವಾ ಪ್ರತಿಷ್ಠಾನ ಮತ್ತು ಸಾರ್ವಜನಿಕ ಶನೀಶ್ವರ ಪೂಜಾ ಸಮಿತಿ ಆಶ್ರಯದಲ್ಲಿ ಫೆ.4 ರಂದು ಕುಂಟಿನಿ ರಾಘವೇಂದ್ರ ಬಾಂಗೀನಾಯ ರವರ ಪೌರೋಹಿತ್ಯದಲ್ಲಿ ಶ್ರೀ ಶನೇಶ್ವರ ಪೂಜೆ ಹಾಗೂ ಪ್ರೊ. ಮದ್ದೂರು ಮೋಹನ್ ಕಲ್ಲೂರಾಯರವರ ನೇತೃತ್ವದಲ್ಲಿ ಹರಿಕಥಾ ಪ್ರವಚನ ಹಾಗೂ ಮಹಾಪೂಜೆ ಜರಗಿತು.

ಶಾಸಕ ಹರೀಶ್ ಪೂಂಜಾ ಮತ್ತು ಬೆಸ್ಟ್ ಫೌಂಡೇಶನ್ ಅಧ್ಯಕ್ಷ ಯುವ ನಾಯಕ ರಕ್ಷಿತ್ ಶಿವರಾಮ್ ರವರನ್ನು ಗೌರವಿಸಲಾಯಿತು. ಸಸಿಹಿತ್ತು ಯಕ್ಷಗಾನ ಮಂಡಳಿಯಿಂದ ಮಹಾ ಶಕ್ತಿ ಮಂತ್ರ ದೇವತೆ ಎಂಬ ತುಳು ಭಕ್ತಿ ಪ್ರಧಾನ ಯಕ್ಷಗಾನ ಬಯಲಾಟವನ್ನು ಆಡಿ ತೋರಿಸಲಾಯಿತು. ಈ ಸಂದರ್ಭದಲ್ಲಿ ಯಕ್ಷಗಾನ ಕಲಾವಿದ ರತ್ನಾಕರ ಆಚಾರ್, ಸರಪಾಡಿಯ ಅಶೋಕ ಶೆಟ್ಟಿ, ಸುಂದರ ಬಂಗಾಳಿ ಇವರನ್ನು ವಿಶೇಷವಾಗಿ ಗೌರವಿಸಲಾಯಿತು.

ರಾಘವೇಂದ್ರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪೀತಾಂಬರ ಹೇರಾಜೆ . ಪ್ರಧಾನ ಕಾರ್ಯದರ್ಶಿ ಶೇಖರ ಬಂಗೇರ ಉಪಾಧ್ಯಕ್ಷ ಮಹಾಬಲ ಶೆಟ್ಟಿ,ಕೋಶಾಧಿಕಾರಿ ವಸಂತ ಸುವರ್ಣ, ಜೊತೆ ಕಾರ್ಯದರ್ಶಿ ಶಂಕರ ಹೆಗ್ಡೆ,ಸಾರ್ವಜನಿಕ ಪೂಜಾ ಸಮಿತಿಯ ಸುರೇಶ್ ಶೆಟ್ಟಿ, ಕೃಷ್ಣ ಶೆಟ್ಟಿ. ಹರೀಶ್ ನಾಯಕ್. ಶ್ರೀ ದಿವಾಕರ್ ಶೆಟ್ಟಿ, ದಿನೇಶ್ ಶೆಟ್ಟಿ.ಹಾಗೂ ಇತರ ಪದಾಧಿಕಾರಿಗಳು ಸಾವಿರಾರು ಭಕ್ತರು ಹಾಜರಿದ್ದರು .

Exit mobile version