Site icon Suddi Belthangady

ಮಚ್ಚಿನ: ಪ್ರೌಢಶಾಲೆಯ ಬಳಿ ಪರಮೇಶ್ವರ ಭಟ್ ರವರ ರಬ್ಬರ್ ತೋಟಕ್ಕೆ ಶಾರ್ಟ್ ಸರ್ಕ್ಯೂಟ್: ಅಪಾರ ಹಾನಿ

ಮಚ್ಚಿನ ಗ್ರಾಮದ ಪ್ರೌಢಶಾಲೆಯ ಬಳಿ ಪರಮೇಶ್ವರ ಭಟ್ ರವರ ರಬ್ಬರ್ ತೋಟಕ್ಕೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿತಗಲಿದ್ದು ಅಪಾರ ಹಾನಿಯಾದ ಘಟನೆ ಫೆ.4 ರಂದು ನಡೆದಿದೆ.

ರಬ್ಬರ್ ತೋಟಕ್ಕೆ ಬೆಂಕಿ ತಗುಲಿದ್ದು ಅಗ್ನಿಶಾಮಕದಳದವರು ಆಗಮಿಸಿ ಬೆಂಕಿ ನಂದಿಸಿದರು. ತುರ್ತು ಪರಿಸ್ಥಿತಿಯಲ್ಲಿ ತಕ್ಷಣ ಶಾಲಾ ವಿದ್ಯಾರ್ಥಿಗಳು, ಸ್ಥಳೀಯರು ಹಾಗೂ ಶಿಕ್ಷಕರು ಬೆಂಕಿಯನ್ನು ನಂದಿಸುವಲ್ಲಿ ಸಹಕರಿಸಿದರು. ಹಲವು ರಬ್ಬರ್ ಗಿಡಗಳು ಸುಟ್ಟು ಹಾನಿಯಾಗಿದೆ.

Exit mobile version